ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ದೆಹಲಿಯಲ್ಲಿ ಆಸ್ಕರ್ ಗೆ ಶ್ರದ್ಧಾಂಜಲಿ

ನವದೆಹಲಿ : ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನವದೆಹಲಿಗೆ ಹೋಗಿರುವ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಹದಿನಾರು ಮಂದಿ ಮಹಿಳೆಯರು ಅಗಲಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಆಸ್ಕರ್ ಫೆರ್ನಾಂಡಿಸ್ ಗೆ ಶೃದ್ಧಾಂಜಲಿ ಯನ್ನು ಅರ್ಪಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ನೇತೃತ್ವದಲ್ಲಿ ನಡೆದ ಈ ಶೃದ್ಧಾಂಜಲಿ ಸಭೆಯಲ್ಲಿ ಆಸ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ನುಡಿನಮನಗಳನ್ನು ಸಲ್ಲಿಸಲಾಯಿತು.

ನಾವು ದೆಹಲಿ ತಲುಪಿದ ಆ ಕ್ಷಣದಲ್ಲೇ ಆಸ್ಕರ್ ಅವರು ನಿಧನರಾದ ಸುದ್ಧಿ ತಿಳಿದು ಬಂತು.ಅಂತಿಮ ದರ್ಶನ ಪಡೆಯಲು ನಾವು ಉಡುಪಿಯಲ್ಲಿರ ಬೇಕಿತ್ತು.ಆದರೆ ಅನಿವಾರ್ಯವಾಗಿ ನಾವು ದೆಹಲಿಯಲ್ಲಿರಬೇಕಾಗಿ ಬಂದಿದೆ.ಆದ್ದರಿಂದ ನಾವು ದೆಹಲಿಯಲ್ಲಿ ವಸತಿ ಪಡೆದಿರುವ ಇಂಟರ್ ನ್ಯಾಷನಲ್ ಯೂಥ್ ಹಾಸ್ಟೆಲ್ಲಿನ ಪಾರ್ಕ್ ಆವರಣದಲ್ಲಿ ಆಸ್ಕರ್ ಅವರ ಭಾವಚಿತ್ರವನ್ನಿರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಮಾಡಿದ್ದೇವೆ.ಅಗಲಿದ ಆಸ್ಕರಣ್ಣನವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ,ಅವರ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ”ಎಂದು ಗೀತಾ ವಾಗ್ಳೆ ತಿಳಿಸಿದ್ದಾರೆ.

ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿ ಶಾಂತಿ ಪಿರೇರಾ, ಜ್ಯೋತಿ ಮೆನನ್, ಮೀನಾಕ್ಷಿ ಮಾಧವ ಬನ್ನಂಜೆ, ಸುಚರಿತ,ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ,ಹೆಬ್ರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಸುನಂದಾ, ಮೋಹಿನಿ ಉಚ್ಚಿಲ, ಗೀತಾ ಸತೀಶ್,ಸುನಂದಾ ಸಾಲಿಯಾನ್, ಜಯಶ್ರೀ ಶೇಟ್,ರಮಾದೇವಿ,ಶಾಂತಿ ಮಣಿಪುರ,ಸುಮಲತಾ, ಸುರೇಖಾ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply