ನೂತನ ಸಂಸತ್ ಭವನದ ಮೇಲೆ ಇತ್ತೀಚೆಗೆ ಪ್ರಧಾನಿ ಮೋದಿ ಅವರಿಂದ ಅನಾವರಣಗೊಂಡ ರಾಷ್ಟ್ರ ಲಾಂಛನದ ಕುರಿತ ಪ್ರತಿಪಕ್ಷಗಳ ಟೀಕೆಗಳಿಗೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಖಡಕ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುಪಮ್ ಖೇರ್, ನಮ್ಮ ರಾಷ್ಟ್ರಲಾಂಛನದ ಸಿಂಹಕ್ಕೆ ಹಲ್ಲುಗಳಿವೆ, ಅಗತ್ಯಬಿದ್ದರೆ ಕಚ್ಚುತ್ತದೆ, ಹಾಗಾಗಿ ನೀವು ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ನೇಹಿತರೇ ಹಲ್ಲುಗಳಿರುವುದರಿಂದಲೇ ಅದನ್ನು ತೋರಿಸಿರುವುದು, ಇದು ಸ್ವತಂತ್ರ ಭಾರತದ ಸಿಂಹ, ಅಗತ್ಯಬಿದ್ದರೆ ಕಚ್ಚುತ್ತದೆ ಜೈ ಹಿಂದ್ ಎಂದು ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.