ರಾಮಜನ್ಮಭೂಮಿ ಹೋರಾಟದಲ್ಲಿಟ್ಪಿದ ನಂಬಿಕೆಗೆ ಜಯ ಸಿಕ್ಕಿದೆ ಎಂದು ಸಂಭ್ರಮಿಸಿದ ಅಡ್ವಾಣಿ

ಲಖನೌ: ಅತ್ಯಂತ ವಿವಾದಾತ್ಮಕ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ಅಂತಿಮ ತೀರ್ಪು ಇಂದು ಪ್ರಕಟವಾಗಿದೆ.ಈ ಕುರಿತು ತೀರ್ಪನ್ನು ಮನಃಪೂರ್ವಕವಾಗಿ ನಾನು ಸ್ವಾಗತಿಸುತ್ತೇನೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿಯವರು ಹೇಳಿದ್ದು ತೀರ್ಪು ಹೊರಬಿದ್ದ ತಕ್ಷಣವೇ ಸಿಹಿಯನ್ನು ಹಂಚಿ ಸಂಭ್ರಮಿಸಿದ್ದಾರೆ. ರಾಮಜನ್ಮಭೂಮಿ ಹೋರಾಟದಲ್ಲಿ ವೈಯಕ್ತಿ ಕವಾಗಿ ನಾನು ಹಾಗೂ ಭಾರತೀಯ ಜನತಾ ಪಕ್ಷ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಂದ ಜಯ ಇದು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಇರ್ನೋವ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಮಾತನಾಡಿ, 1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ಆ ಘಟನೆಯಲ್ಲಿ ಯಾವುದೇ ಸಂಚು ನಡೆದಿರಲಿಲ್ಲ ಎಂಬ ವಿಷಯವನ್ನು ಈ ತೀರ್ಪು ತೋರಿಸಿಕೊಟ್ಟಿದೆ ಎಂದಿದ್ದಾರೆ. ನ್ಯಾಯಾಲಯದ ಈ ತೀರ್ಪು ನನಗೆ ಅತ್ಯಂತ ಸಂತಸ ನೀಡಿದ್ದು, ಇನ್ನು ಎಲ್ಲರೂ ನಮ್ಮ ಗಮನವನ್ನು ರಾಮಮಂದಿರ ನಿರ್ಮಾಣದ ಕಾರ್ಯದಡೆಗೆ ಕೇಂದ್ರಿಕೃತ ಮಾಡೋಣ ಎಂದಿದ್ದಾರೆ.

 
 
 
 
 
 
 
 
 
 
 

Leave a Reply