ಪಾಕತಜ್ಞ ಕೊಡಂಗಳ ನಾರಾಯಣ ಭಟ್ ನಿಧನ

ಉಡುಪಿ: ಹಿರಿಯ ಪಾಕತಜ್ಞ ಕೊಡಂಗಳ ನಾರಾಯಣ ಭಟ್ (83 ವರ್ಷ ) ವಯೋಸಹಜ ಅಸ್ವಾಸ್ಥ್ಯದಿಂದ ಮಂಗಳವಾರ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅನೇಕ ಶಿಷ್ಯರನ್ನು ಅವರು ಅಗಲಿದ್ದಾರೆ .

ಉಡುಪಿ ಅಡುಗೆ ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದ ನಾರಾಯಣ ಭಟ್, ಅನೇಕ ಪರ್ಯಾಯೋತ್ಸವ, ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನಡೆದ ನೂರಾರು ನಾಗಮಂಡಲೋತ್ಸವ, ಬ್ರಹ್ಮಕಲಶೋತ್ಸವಗಳಲ್ಲಿ ಸಾವಿರಾರು ಮಂದಿಗೆ ಭೋಜನ ಸಿದ್ಧಪಡಿಸಿ ಪ್ರಸಿದ್ಧರಾಗಿದ್ದರು.ಅಡುಗೆ ಕ್ಷೇತ್ರಕ್ಕೆ ಅನೇಕ ಶಿಷ್ಯರನ್ನು ನೀಡಿದ್ದರು. ಇವರ ನಿಧನಕ್ಕೆ ಉಡುಪಿಯ ಶಿವಳ್ಳಿ ಅಡುಗೆಯವರ ಸಂಘ ಮತ್ತು ಶಾಸಕ ಕೆ ರಘುಪತಿ ಭಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

 
 
 
 
 
 
 
 
 
 
 

Leave a Reply