ಜಿಲ್ಲೆಯಲ್ಲಿ ​ನಂದಿನಿ ​ಸಿಹಿ ಉತ್ಸವ ಆರಂಭ

ರಾಜ್ಯದಲ್ಲಿ ಹಾಲು ಸಂಗ್ರಹಣೆಯಲ್ಲಿ ಸಮೃದ್ಧಿ ಹೊಂದಿರುವುದರಿಂದ ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ​ಯು  ವರ್ಷದಲ್ಲಿ ಎರಡು ಬಾರಿ ​ಸಿಹಿ ​ಉತ್ಸವ ಆಚರಿಸುತ್ತಿ​ದೆ.  ​  ​ಉತ್ಸವದ ಅವಧಿಯಲ್ಲಿ ಉತ್ಪನ್ನಗಳಿಗೆ​ 10%​ ರಿಯಾಯಿತಿಯನ್ನು ನೀಡುವ ಗ್ರಾಹಕ​ ​ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ​. ​

ದಿನಾಂಕ ​19.08.2021 ರಿಂದ 31.8.2021ರ ತನಕ ಒಟ್ಟು 13 ದಿನಗಳ ಕಾಲ ಈ ಉತ್ಸವವನ್ನು ಆಚರಿಸುತ್ತಿ​ದೆ.  ಈ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನನ್ನನ್ನು ಇನ್ನಷ್ಟು ಜನರಿಗೆ ಪರಿಚಯಿಸಿ ನಂದಿನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ರಾಜ್ಯದ ಹೈನುಗಾರರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ
​​
ರಾಜ್ಯದಲ್ಲಿ ಸಾಲು ಸಾಲು​ ಸಾಲು ​ಹಬ್ಬಗಳು ಪ್ರಾರಂಭವಾಗಿರುವುದರಿಂದ ಹಬ್ಬಗಳನ್ನು ನಂದಿನಿಯೊಂದಿಗೆ ಆಚರಿ​ಸಿ ಸಂತಸ ಪಡೋಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಅಧ್ಯಕ್ಷರಾದ ​ಕೆ. ​ರವಿರಾಜ್​ ಹೆಗ್ಡೆ ಹೇಳಿದರು.   

ಈ ಸಂದರ್ಭದಲ್ಲಿ​ ​ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ​, ಸ್ಮಿ​ತಾ  ​ಆರ್. ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಸುಧಾಕರ್​, ​ ಮಾರುಕಟ್ಟೆ ವಿಭಾಗದ ​ಅಧಿಕಾರಿ ​ಸಂದೀ​ಪ್ ಮತ್ತು ಸತೀಶ್ ಪೂಜಾರಿ​, ನಂದಿನಿ ಮಳಿಗೆಯ ​ಮಾಲಕ ​ಪ್ರಭಾತ್ ಕೋಟ್ಯಾನ್ ​ಉಪಸ್ಥಿತರಿದ್ದರು.  ​​
 
 
 
 
 
 
 
 
 
 
 

Leave a Reply