ನೈನಾ ನಾಗೇಂದ್ರ ನಾಯಕ್ ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಉಡುಪಿ :- ಬಹುಮುಖ ಪ್ರತಿಭೆಯ ಸಮಾಜ ಸೇವಕಿ ನೈನಾ ನಾಗೇಂದ್ರ ನಾಯಕ್ ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೇಸಿಐ ವಲಯ 15 ರ ವತಿಯಿಂದ ವಲಯ ವ್ಯವಹಾರ ಸಮ್ಮೇಳನ ಸಂಚಲನ ಕಾಯ೯ಕ್ರಮದಲ್ಲಿ ವಲಯಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ಬೆಳ್ಮಣ್ಣು ನಲ್ಲಿ ನಡೆದ ಈ ಕಾಯ೯ಕ್ರಮದಲ್ಲಿ ವಲಯ ವ್ಯವಹಾರ ನಿದೇ೯ಶಕ ಸವ೯ಜ್ಞ ತಂತ್ರಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದಭ೯ದಲ್ಲಿ ನಿಕಟ ಪೂವ೯ ವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ, ವಲಯ ಪ್ರಥಮ ಮಹಿಳೆ ಮರಿಯಾ ರೊಡಿಗ್ರಸ್, ಉಪಾಧ್ಯಕ್ಷ ರವಿಚಂದ್ರ ಪಾಟಾಳಿ, ಉಡುಪಿ ಸಿಟಿ ಘಟಕ ಅಧ್ಯಕ್ಷ ಡಾ” ವಿಜಯ್ ನೆಗಳೂರು ಮತ್ತು ವಲಯಾಧಿಕಾರಿಗಳು ಉಪಸ್ಥಿತರಿದ್ದರು. ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಮುಖ್ಯವಾಗಿ ಹೋಂ ಡಾಕ್ಟರ್ ಫೌಂಡೇಶನ್ ಸಕ್ರೀಯ ಸದಸ್ಯೆಯಾಗಿದ್ದಾರೆ.

 
 
 
 
 
 
 
 
 
 
 

Leave a Reply