ಉದಯವಾದಳು ಚೆಲುವ ಕನ್ನಡದೇವಿ~ ನಾಡದೇವಿ ಭಾವಚಿತ್ರ ಫೈನಲ್

ಬೆಂಗಳೂರು: ನಾಡಗೀತೆ ಅವಧಿ, ರಾಗಸಂಯೋಜನೆ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ವಿವಾದ ಬಗೆಹರಿಸಿದ್ದ ಸರ್ಕಾರ, ಇದೀಗ ನಾಡದೇವಿ ಭಾವಚಿತ್ರಕ್ಕೂ ನಿರ್ದಿಷ್ಟ ರೂಪ ಹಾಗೂ ಸ್ಪಷ್ಟತೆಯ ಅಂತಿಮ ಮುದ್ರೆಯೊತ್ತಿದೆ.
ಸರ್ಕಾರವೇ ರಚಿಸಿದ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಶಿಫಾರಸು ಮಾಡಿದ ನಾಡದೇವತೆ ಚಿತ್ರಕೃತಿಯನ್ನು ಅಂಗೀಕರಿಸಿದೆ. ಸರ್ಕಾರದ ಪರಿಕಲ್ಪನೆ, ಸಮಿತಿ ಸೂಚನೆಯಂತೆ ಬೆಂಗಳೂರಿನ ಕಲಾವಿದ ಕೆ. ಸೋಮಶೇಖರ್ ಈ ಚಿತ್ರ ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸ್ತು ಎಂದ ಬಳಿಕ ನಾಡದೇವಿಯ ಅಧಿಕೃತ ಹಾಗೂ ಪ್ರಮಾಣಿತ ಭಾವಚಿತ್ರವಾಗಲಿದೆ.
 
 
 
 
 
 
 
 
 

Leave a Reply