ಮುತಾಲಿಕ್ ರವರಿಗೆ ಬೆದರಿಕೆ ಕರೆ!

 ಹಿಂದೂ ಹೃದಯ ಸಾಮ್ರಾಟ್ ಪ್ರಮೋದ್ ಮುತಾಲಿಕ ರವರಿಗೆ ನಿನ್ನೆಯಿಂದ ಉರ್ದು ಮಿಶ್ರಿತ ಮಂಗಳೂರು ಭಾಷೆಯಲ್ಲಿ ಅತ್ಯಂತ ಕೆಟ್ಟ ಶಬ್ದದಿಂದ ಹಾಗೂ ಕೊಚ್ಚಿ ಕೊಚ್ಚಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವುದನ್ನು ಶ್ರೀರಾಮ ಸೇನೆ ಉಡುಪಿ ಜಿಲ್ಲೆಯು ಗಂಭೀರವಾಗಿ ಪರಿಗಣಿಸಿದೆ. ಕರಾವಳಿಯ ಮಿಸ್ರಿತ ಭಾಷೆ ಇರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಇದರ ಬಗ್ಗೆ ತನಿಖೆ ನಡೆಸಬೇಕೆಂದು ಉಡುಪಿ ಜಿಲ್ಲಾ ಶ್ರೀರಾಮ ಸೇನೆ ಸರಕಾರಕ್ಕೆ ಆಗ್ರಹಿಸುತ್ತದೆ.

ಇತ್ತೀಚೆಗೆ ಕರಾವಳಿಯಿಂದಲೇ ಕೆಲವರಿಗೆ ಬೆದರಿಕೆ ಕರೆಗಳು ಬಂದು ಹಾಗೂ ತದನಂತರ ಆದ ಅನಾಹುತಗಳು ಸರಕಾರಕ್ಕೆ ಗೊತ್ತಿದೆ. ಅದಾಗಿಯೂ ಹಿಂದೂ ಹೃದಯ ಸಾಮ್ರಾಟ್ ಪ್ರಮೋದ್ ಮುತಾಲಿಕ್ ರವರಿಗೆ ಬಂದಿರುವ ಬೆದರಿಕೆ ಕರೆಯನ್ನು ಗಂಭೀರವಾಗಿ ಸರಕಾರವು ಪರಿಗಣಿಸಬೇಕು. ಮುತಾಲಿಕ್ ರವರಿಗೆ ಸರಕಾರದಿಂದ ಕೊಡುವ ಸೆಕ್ಯೂರಿಟಿಯನ್ನು ಇನ್ನಷ್ಟು ಹೆಚ್ಚಿಸಬೇಕು. ಸಾವಿನೊಂದಿಗೆ ಸರಸವಾಡಿ ನಾಟಕೀಯ ಬೆಳವಣಿಗೆಗಳನ್ನು ಮಾಡದಿರಿ, ಸರಕಾರ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುತಾಲಿಕ್ ಅವರಿಗೆ ಶ್ರೀರಾಮಸೇನೆ ಸಂಘಟನೆಯಿಂದಲೇ ಭದ್ರತೆಯನ್ನು ಕೊಡಲು ನಾವು ಸಿದ್ಧರಿದ್ದೇವೆ ಹಾಗೂ ಮುಂದೆ ಆಗುವ ಅನಾಹುತಕ್ಕೆ ಸರಕಾರಕ್ಕೆ ಸರಕಾರವೇ ನೇರ ಜವಾಬ್ದಾರಿ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply