ರಾಗಧನ ಉಡುಪಿ (ರಿ) ಇದರ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಸಂಗೀತ ಶಿಬಿರ ಹಾಗೂ ಕಛೇರಿಯನ್ನು ಉಡುಪಿಯ ಎಂ.ಜಿ.ಎಂ.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 9.4.2022 ಬೆಳಿಗ್ಗೆ 9.30 ರಿಂದ ಆಯೋಜಿಸಲಾಗಿದೆ. ವಿದ್ವಾನ್ ಡಾ.ಆರ್.ಸೂರ್ಯ ಪ್ರಕಾಶ್ ಅವರು ಮನೋಧರ್ಮ ಮತ್ತು ಸಂಗೀತದ ಹೊಸಹೊಳಹುಗಳ ಬಗ್ಗೆ ಶಿಬಿರ ನಡೆಸಿ, ಸಂಜೆ 5.30ರಿಂದ ಕಛೇರಿ ನಡೆಸಿ ಕೊಡಲಿದ್ದಾರೆ. ಗಣರಾಜ ಕಾರ್ಲೆ, ವಯಲಿನ್ ನಲ್ಲಿ, ಸುನಾದಕೃಷ್ಣ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಅಪರಾಹ್ನ 3.30ಕ್ಕೆ ವಿದುಷಿ ಪವನ ಬಾಲಚಂದ್ರ ಅವರ ವೀಣಾ ವಾದನ ಕಛೇರಿಯೂ ನಡೆಯಲಿದೆ. ಶಿಬಿರಾರ್ಥಿಗಳು ಮೊದಲೇ ಹೆಸರು ನೋಂದಾಯಿಸ ಬೇಕೆಂದು ಕಾರ್ಯದರ್ಶಿ ಉಮಾಶಂಕರಿ (9964140601) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.