ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ “ಋರ್ಷ್ಯಚ” ವಿಚಾರ ಸಂಕಿರಣ

ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ದಿನಾಂಕ ೧೫.೦೭.೨೦೨೨ ರಂದು “ಋರ್ಷ್ಯಚ” ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ.ಗುರುರಾಜ್ ತಂತ್ರಿ, ಸ್ನಾತಕ ಪೂರ್ವ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ್ ಜಿ, ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಪತಿ ಆಚಾರ್ಯ, ರೋಗ ನಿಧಾನ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ಶೆಣೈ ಹಾಗೂ ಸಂಪನ್ಮಾಲ ಅತಿಥಿ ಪ್ರೊಫೆಸರ್ ರಾಘವೇಂದ್ರ ಎಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವಿಚಾರ ಗೋಷ್ಠಿಯಲ್ಲಿ ಸಂಶೋಧನ ವಿಧಾನ ಬಗ್ಗೆ ಪ್ರೊಫೆಸರ್ ರಾಘವೇಂದ್ರ ಎಲ್ ಮತ್ತು ಅಂಕಿ ಅಂಶಗಳ ಬಗ್ಗೆ ಡಾ.ಆಶಾ ಕಾಮತ್ ಇವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಡಾ.ಮಾಧವಿ, ಸಹಾಯಕ ಪ್ರಾಧ್ಯಾಪಕರು ಕಾರ್ಯಕ್ರಮವನ್ನು ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply