ಮುನಿಯಾಲ್ ಆಯುರ್ವೇದ ಕಾಲೇಜನಲ್ಲಿ “ಪೋಷಣಕ್ಕಾಗಿ ಆಯುರ್ವೇದ” ಕಾರ್ಯಕ್ರಮ

6ನೇಯ ರಾಷ್ಟೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿಯ ಅಂಗವಾಗಿ “ಪೋಷಣಕ್ಕಾಗಿ ಆಯುರ್ವೇದ” ಎನ್ನುವ ಶೀರ್ಷಿಕೆಯಡಿಯಲ್ಲಿ ಮಣಿಪಾಲದ ಮುನಿಯಾಲ್ ಆಯುರ್ವೇದ ಸಂಸ್ಥೆಯು ದಿನಾಂಕ ನವೆಂಬರ್ 2ರಂದು   ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. 
ಆಯುರ್ವೇದದಲ್ಲಿ ಹೇಳಿದ ವಿವಿಧ  ಪಥ್ಯಾಹಾರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಸಂಸ್ಥೆಯ ಸಭಾಂಗಣ ದಲ್ಲಿ ಬೆಳಿಗ್ಗೆ 10.00ರಿಂದ 02.30ರವರೆಗೆ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ಯವರು ದಿಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿ ಆಹಾರ ಮತ್ತು ಪಥ್ಯಾಹಾರ ಮತ್ತು ಸಮಕಾಲೀನಕ್ಕೆ ಅದರ ಅಗತ್ಯತೆಯ ಬಗ್ಗೆ ಸಭಿಕರಿಗೆ ತಿಳಿಸಿದರು. 
ಗೋಸ್ವಾಲ್ ಆಯುರ್ವೇದ ಕೇಂದ್ರದ ಮುಖ್ಯಸ್ಥರಾದ ಡಾ.ತನ್ಮಯ ಗೋಸ್ವಾಮಿ  ಆಯುರ್ವೇದ ಮತ್ತು ಧನ್ವಂತರಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಡಾ.ಶ್ರದ್ಧಾ ಶೆಟ್ಟಿ, ಉಪ ಪ್ರಾಂಶು ಪಾಲರಾದ ಡಾ.ಹರಿಪ್ರಸಾದ್ ಶೆಟ್ಟಿ,  ಸ್ನಾತಕೋತ್ತರ ಶಿಕ್ಷಣ ವಿಭಾಗದ ಡೀನ್ ಡಾ.ಗುರುರಾಜ ಡಿ, ಸ್ನಾತಕ ವಿಭಾಗದ ಡೀನ್ ಡಾ.ರಮೇಶ್, ಸ್ವಸ್ಥ ವೃತ್ತ ವಿಭಾಗದ ಮುಖ್ಯಸ್ಥರಾದ ಡಾ.ವ್ಯಾಸರಾಜ್ ತಂತ್ರಿ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
ಡಯಾಬಿಟೀಸ್,  ಸ್ಥೌಲ್ಯ, ಅಧಿಕ ರಕ್ತದೊತ್ತಡ, ಆಮ್ಲಪಿತ್ತ ರೋಗಗಳಲ್ಲಿ ತೆಗೆದುಕೊಳ್ಳಬೇಕಾದ ಪಥ್ಯಾಹಾರ ಜೊತೆಗೆ ಪೋಷಣಯುಕ್ತ ಆಹಾರಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಪರಾಹ್ನ ನಂತರ ವಿದ್ಯಾರ್ಥಿಗಳಿಗೆ ಕೋವಿಡ್ 19ಕ್ಕೆ ಪಥ್ಯಾಹಾರ ಶೀರ್ಷಿಕೆಯಡಿ ಸ್ಪರ್ಧೆ ಏರ್ಪಡಿಸಲಾಯಿತು. 
 
 
 
 
 
 
 
 
 
 
 

Leave a Reply