ಮೂಡುಗಿಳಿಯಾರು -ವನಮಹೋತ್ಸವ ಕಾರ್ಯಕ್ರಮ

ಕೋಟ: ಗಿಳಿಯಾರು ಯುವಕ ಮಂಡಲದ ವತಿಯಿಂದ ಮೂಡುಗಿಳಿಯಾರು ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು.
ಶಾಲೆಯ ಆವರಣದಲ್ಲಿ ವಿವಿಧ ಸಸ್ಯಗಳ ಉದ್ಯಾನವನ ನಿರ್ಮಿಸಲಾಯಿತು..ಅಲ್ಲದೆ ಎಫ್‌ಎಸ್‌ಎಲ್ ಇಂಡಿಯಾ ವತಿಯಿಂದ ಅರಣ್ಯ ಇಲಾಖೆಯ ಡಿಎಫ್‌ಒ ಆಶಿಶ್ ರೆಡ್ಡಿ ವಿಶೇಷ ಮುತುವರ್ಜಿಯಲ್ಲಿ ನೀಡಲಾದ ವಿವಿಧ ಬಗೆಯ ಸಸ್ಯಗಳನ್ನು ಶಾಲಾ ಮುಖ್ಯ ಶಿಕ್ಷಕ ರಮೇಶ್,ಎಸ್‌ಡಿಎಂಸಿ ಅಧ್ಯಕ್ಷ ಯೋಗೇಂದ್ರ ಮತ್ತು ಸುರೇಶ್ ಗಿಳಿಯಾರು ನೇತೃತ್ವದಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಶೇಖರ್, ಎಫ್‌ಎಸ್‌ಎಲ್ ಇಂಡಿಯಾದ ದಿನೇಶ್ ಸಾರಂಗ, ಶ್ರವಣ ಕುಮಾರ್,ಶಿಕ್ಷಕರಾದ ವಸಂತಿ,ಬಬಿತಾ,ರೇಖಾ ಮತ್ತು ಯುವಕಮಂಡಲದ ಸದಸ್ಯ ಅಚ್ಚು÷್ಯತಾನಂದ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply