ಯುವ ಉದ್ಯಮಿ ಆತ್ಮಹತ್ಯೆ

ಮೂಡುಬಿದಿರೆ: ಕಳೆದ ಶನಿವಾರ ಏಪ್ರಿಲ್ 2, ಯುಗಾದಿಯಂದು ಮೂಡುಬಿದಿರೆ ಎಂಸಿಎಸ್ ಬ್ಯಾಂಕ್ ಹತ್ತಿರದಲ್ಲಿ ಆರಂಭಗೊಂಡ ಅಬ್ಬಕ್ಕ ಬೇಕರಿಯ ಪಾಲುದಾರ, ಮೂಡುಕೊಣಾಜೆ ಕೊಪ್ಪದೊಟ್ಟು ನಿವಾಸಿ ರೋಶನ್ ಆರ್ ಸುವರ್ಣ ಏಪ್ರಿಲ್ 5ರಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಅವಿವಾಹಿತರಾಗಿದ್ದಾರೆ.

ಕನ್ನಡದ ಖ್ಯಾತ ಚಿತ್ರನಟ ವಿಜಯ ರಾಘವೇಂದ್ರ ಅವರು ಯುಗಾದಿಯಂದು ರೋಶನ್ ಸುವರ್ಣ ಪಾಲುದಾರಿಕೆಯ ಅಬ್ಬಕ್ಕ ಬೇಕರಿಯ ಉದ್ಘಾಟನೆಗೈದು ಶುಭ ಹಾರೈಸಿದ್ದರು. ರೋಶನ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

 
 
 
 
 
 
 
 
 
 
 

Leave a Reply