ದೈವ ದತ್ತ ಚಿಂತನೆಗಳ ಫಲವೋ ಎಂಬಂತೆ ಮುದ್ರಾಡಿ ಊರಿನಲ್ಲಿಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಸಹಿತ ದೇವಾಲಯಗಳ ಸಂಕೀರ್ಣ ನಿರ್ಮಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡಿದ ಮುದ್ರಾಡಿ ನಾಟ್ಕದೂರು ಶ್ರೀಮೋಹನ್ (ಪಾತ್ರಿ) ಸ್ವಾಮೀಜಿ ಯವರಿಗೆ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.