ಮೊಗವೀರ ಯುವ ಸಂಘಟನೆ ಹಿರಿಯಡಕ ಘಟಕದಿಂದ ನಿವೃತ್ತ ಯೋಧ ಉಮೇಶ್ ಶೆಟ್ಟಿಬೆಟ್ಟುರವರಿಗೆ ಅಭಿನಂದನೆ

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹಿರಿಯಡಕ ಘಟಕ ಇದರ ವತಿಯಿಂದ, ಭಾರತ ದೇಶದ ಹಲವು ಗಡಿ ಭಾಗಗಳಲ್ಲಿ ಭಾರತೀಯ ಭೂ ಸೇನೆಯಲ್ಲಿ 17 ವ‌‌ರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧ ಲಾನ್ಸ್ ನಾಯಕ್ ಶ್ರೀ ಉಮೇಶ್ ಶೆಟ್ಟಿಬೆಟ್ಟುರವರನ್ನು ಶುಕ್ರವಾರ  ಮಾದವ ಮಂಗಳ ಸಭಾಭವನ ಹಿರಿಯಡಕದಲ್ಲಿ ಸನ್ಮಾನಿಸಲಾಯಿತು. 
 
ಮುಖ್ಯ ಅತಿಥಿಯಾಗಿ ಸತೀಶ್ ಕುಂದರ್ ಮಲ್ಪೆ, ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ  ರಾಜೇಂದ್ರ ಸುವರ್ಣ ಮೊಗವೀರ ಯುವ ಸಂಘಟನೆ ಹಿರಿಯಡ್ಕ ಘಟಕಾಧ್ಯಕ್ಷ ವಿಜಯ ಮೆಂಡನ್ ಕೊಂಡಾಡಿ, ಉದಯ ಪರೀಕ, ಉದಯ ಬಂಗೇರ ಬಜೆ, ಉಮೇಶ್ ಶೆಟ್ಟಿಬೆಟ್ಟುರವರ ತಂದೆ ಶಿವ ಸಾಲಿಯಾನ್‌, ತಾಯಿ ಶ್ರೀಮತಿ ವನಜಾ, ಪತ್ನಿ ಶ್ರೀಮತಿ ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು. ನವೀನ್ ಕೆ. ಶೆಟ್ಟಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಶ್ರೀ ಮಂಜುನಾಥ ಮದಗ ವಂದಿಸಿದರು.
 
 
 
 
 
 
 
 
 
 
 

Leave a Reply