ಮಿಲಾಗ್ರಿಸ್ ಕಾಲೇಜು: ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ಪುಷ್ಪ ನಮನ

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ರಾಷ್ಟ್ರೀಯ ಸೇವಾ ಯೊಜನೆ, ಎನ್.ಸಿ. ಸಿ ಯ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವರವರು ಕಾರ್ಗಿಲ್ ಯುದ್ಧದ ಬಗ್ಗೆ ತಿಳಿಸುತ್ತ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಅಧಿಕಾರಿಗಳು ಹಾಗೂ ಯೋಧರ ಬಲಿದಾನವನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಸೋಫಿಯಾ ಡಯಾಸ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಶಾಲೆಟ್ ಮಥಿಯಾಸ್, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಹರಿಣಾಕ್ಷಿ, ಬಿ. ಸಿ. ಯ ಮುಖ್ಯಸ್ಥರಾದ ಶ್ರೀಮತಿ ವಿಲ್ಮಾ, ವಿದ್ಯಾರ್ಥಿ ಸಂಘದ ನಿರ್ದೇರ್ಶಕರಾದ ಶ್ರೀಮತಿ ಚಂದ್ರಿಕಾ, ಐ ಕ್ಯೂ ಎ ಸಿ ಸಂಯೋಜಕರಾದ ಡಾ. ಜಯರಾಮ್ ಶೆಟ್ಟಿಗಾರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀಮತಿ ಅನುಪಮಾ ಜೋಗಿ ಹಾಗೂ ಮೆಲ್ಸನ್ ಡಿಸೋಜ, ಎನ್. ಸಿ. ಸಿ ಅಧಿಕಾರಿ ಸೀಝರ್ ಗೋನ್ಸಾವೆಸ್, ವಿದ್ಯಾರ್ಥಿ ನಾಯಕ ಜಿಮ್ಸನ್ ಹಾಗೂ ಕಾರ್ಯದರ್ಶಿ ಅನನ್ಯ ಆಚಾರ್ಯ ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ಪುಷ್ಪ ನಮನವನ್ನು ಸಲ್ಲಿಸುತ್ತ ಗೌರವ ಅರ್ಪಣೆ ಸಲ್ಲಿಸಿದರು

 
 
 
 
 
 
 
 
 
 
 

Leave a Reply