ಮಣಿಪಾಲ ಮೆಸ್ಕಾಂ  ತನ್ನ ಸ್ವಂತ ಕಟ್ಟಡ​ಕ್ಕೆ ಸ್ಥಳಾಂತರ

ಮಣಿಪಾಲ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಲ್ಲಿ ನಿರ್ಮಿಸಿದ  ಉಪ ವಿಭಾಗದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ  ಬುಧವಾರ ನೆಡೆಯಿತು​. ಶಾಸಕ ರಘುಪತಿ ಭಟ್  ದೀಪ ಬೆಳಗಿಸಿ ಚಾಲನೆ ನೀಡಿ​ ಮಾತನಾಡಿದರು ​ಮಣಿಪಾಲ ಮೆಸ್ಕಾಂ  ತನ್ನ ಸ್ವಂತ  ಕಟ್ಟಡ​ಕ್ಕೆ ಸ್ಥಳಾಂತರ ಗೊಂಡಿದೆ  ಜನಸಾಮ್ಯಾನರಿಗೆ  ನಿತ್ಯ ಜೀವನದಲ್ಲಿ ವಿದ್ಯು​ತ್  ಉಪಯೋಗ ಅವಿಭಾಜ್ಯ ಅಂಗವಾಗಿದೆ​. ಉತ್ತಮ ಗುಣ ಮಟ್ಟದ ​ಸೇವೆ ಹಾಗು ​ನಿರಂತರ ವಿದ್ಯತ್ ಸರಬರಾಜು ನೀಡುವಲ್ಲಿ ಉಡುಪಿ ಮೆಸ್ಕಾಂ ರಾಜ್ಯದಲ್ಲಿಯೇ ​ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು ​. 

,ಕಟ್ಟಡ ನಿರ್ಮಾಣ ಸಿವಿಲ್ ಇಜಿನಿಯರ್  ಲೋಕನಾಥ ಮಂಗಳೂರು ​ಹಾಗು ​ ರವಿಕುಮಾರ ರವರನ್ನು  ಶಾಲು ಹೊದಿಸಿ ಸ್ಮರಣಿಕೆ ನೀಡಿ  ಗೌರವಿಸಲಾಯಿತು .  ಸಮಾರಂಭದಲ್ಲಿ  ​ಮುಖ್ಯ  ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯಿತ ಅಧ್ಯಕ್ಷ ದಿನಕರ ಬಾಬು , ಉಡುಪಿ ನಗರಸಭೆಯ ಅಧ್ಯಕ್ಷ ಸುಮಿತ್ರಾ ನಾಯಕ ,​ ​ನಗರಸಭಾ ಸದಸ್ಯ​ ​ಶ್ರೀಮತಿ ಕಲ್ಪನಾ ,  ಉಡುಪಿ ತಾಲೋಕ್ ಪಂಚಾಯತ್ ಅಧ್ಯಕ್ಶ ಸಂಧ್ಯಾ ಕಾಮತ್,  ಉಡುಪಿ ಮೆಸ್ಕಾಂ ಅಧೀಕ್ಷಕ    ನರಸಿಂಹ ಪಂಡಿತ್ , ಕಾರ್ಯನಿರ್ವಾಕ ಇಂಜಿನಿಯರ್  ದಿನೇಶ ಉಪಾದ್ಯಾಯ , ​ ​ಮಾರ್ತಾಂಡಪ್ಪ ​ಉಪಸ್ಥಿತರಿದ್ದರು. ಮೆಸ್ಕಾಂ ವಿವಿಧ ವಿಭಾಗದ ಅಧಿಕಾರಿಗಳು ,​ ​ಹಾಗು ಸಿಬ್ಬಂ​​ದಿಗಳು  ಉಪಸ್ಥಿತರಿದ್ದರು 
 
ಸಹಾಯಕ ಕಾರ್ಯನಿರ್ವಾಕ ಇಂಜಿನಿಯರ್  ಪ್ರಶಾಂತ್ ಪುತ್ರನ್ ಸ್ವಾಗತಿಸಿದರು.​ ​ ರಾಜೇಶ್ವರಿ ಪ್ರಾರ್ಥನೆಗೈದರು​. ​ ಗಿರೀಶ್ ಉಡುಪಿ ​ನಿರೂಪಿಸಿದರು 
 
 
 
 
 
 
 
 
 
 
 

Leave a Reply