ಮಣಿಪಾಲ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಲ್ಲಿ ನಿರ್ಮಿಸಿದ ಉಪ ವಿಭಾಗದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಬುಧವಾರ ನೆಡೆಯಿತು. ಶಾಸಕ ರಘುಪತಿ ಭಟ್ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು . ಮಣಿಪಾಲ ಮೆಸ್ಕಾಂ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದೆ ಜನಸಾಮ್ಯಾನರಿಗೆ ನಿತ್ಯ ಜೀವನದಲ್ಲಿ ವಿದ್ಯುತ್ ಉಪಯೋಗ ಅವಿಭಾಜ್ಯ ಅಂಗವಾಗಿದೆ. ಉತ್ತಮ ಗುಣ ಮಟ್ಟದ ಸೇವೆ ಹಾಗು ನಿರಂತರ ವಿದ್ಯತ್ ಸರಬರಾಜು ನೀಡುವಲ್ಲಿ ಉಡುಪಿ ಮೆಸ್ಕಾಂ ರಾಜ್ಯದಲ್ಲಿಯೇ ಹೆಸರುವಾಸಿಯಾಗಲಿ ಎಂದು ಶುಭ ಹಾರೈಸಿದರು .
,ಕಟ್ಟಡ ನಿರ್ಮಾಣ ಸಿವಿಲ್ ಇಜಿನಿಯರ್ ಲೋಕನಾಥ ಮಂಗಳೂರು ಹಾಗು ರವಿಕುಮಾರ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು . ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯಿತ ಅಧ್ಯಕ್ಷ ದಿನಕರ ಬಾಬು , ಉಡುಪಿ ನಗರಸಭೆಯ ಅಧ್ಯಕ್ಷ ಸುಮಿತ್ರಾ ನಾಯಕ , ನಗರಸಭಾ ಸದಸ್ಯ ಶ್ರೀಮತಿ ಕಲ್ಪನಾ , ಉಡುಪಿ ತಾಲೋಕ್ ಪಂಚಾಯತ್ ಅಧ್ಯಕ್ಶ ಸಂಧ್ಯಾ ಕಾಮತ್, ಉಡುಪಿ ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್ , ಕಾರ್ಯನಿರ್ವಾಕ ಇಂಜಿನಿಯರ್ ದಿನೇಶ ಉಪಾದ್ಯಾಯ , ಮಾರ್ತಾಂಡಪ್ಪ ಉಪಸ್ಥಿತರಿದ್ದರು. ಮೆಸ್ಕಾಂ ವಿವಿಧ ವಿಭಾಗದ ಅಧಿಕಾರಿಗಳು , ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು