ಮಟ್ಟು ವಲಯ ಬ್ರಾಹ್ಮಣ ಸಮಿತಿ ವತಿಯಿಂದ ವಲಯದ ಸಮಾಜ ಬಾಂಧವರ ವಿಧ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ , ಪ್ರೋತ್ಸಾಹ ಧನ ವಿತಣಾ ಕಾರ್ಯಕ್ರಮ ಭಾನುವಾರದಂದು ನಡೆಯಿತು. ವಿದ್ವಾನ್ ಪ್ರವೀಣ್ ತಂತ್ರಿ ಕಾರ್ಯಕ್ರಮ ಉದ್ಗಾಟಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯರವರು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ, ಸಂಧರ್ಬೋಚಿತವಾಗಿ ಮಾತನಾಡಿದರು.
ದೇವಳದ ಆಡಳಿತ ಮುಕ್ತೇಸರ ಎಂ. ಲಕ್ಷ್ಮೀನಾರಾಯಣ ರಾವ್, ಅರ್ಚಕ ಶ್ರೀಕಾಂತ ಆಚಾರ್ಯ, ಕ್ರತಿಕಾ ರಾವ್ ವಲಯ ಅಧ್ಯಕ್ಷ ಎಂ. ಬಲರಾಮ ರಾವ್, ಉಪಾಧ್ಯಕ್ಷ ಎಂ. ಅರುಣಾಚಲ ರಾವ್, ಕಾರ್ಯದರ್ಶಿ ಶ್ರೀಷ ಆಚಾರ್ಯ, ಕೋಶಾಧಿಕಾರಿ, ಕೆ ರಾಘ ವೇಂದ್ರ ರಾವ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.