ಮಧ್ಯರಾತ್ರಿ ಹಸೆಮಣೆ ಏರಿದ ಯುವಜೋಡಿ!

ಬೆಂಗಳೂರಿನಲ್ಲಿ ಪೊಲೀಸರ ಸಮ್ಮುಖದಲ್ಲಿ ಯುವಜೋಡಿ ಮಧ್ಯರಾತ್ರಿ ಹಸೆಮಣೆ ಏರಿದ್ದಾರೆ.

ನೆಲಮಂಗಲ ಮೂಲದ ಬಿಂದು ಹಾಗೂ ಹಾವೇರಿ ಮೂಲದ ಕರುಬಸಪ್ಪ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು,ಅವರ ವಿವಾಹ ಪೊಲೀಸರು‌ ನಡೆಸಿ ಕೊಟ್ಟಿದ್ದಾರೆ.

ಪೋಷಕರು ಬಿಂದು ಹಾಗೂ ಕರುಬಸಪ್ಪ ಪ್ರೀತಿಗೆ ವಿರೋಧಿಸಿದ್ದರು. ಇದರಿಂದಾಗಿ ಇಬ್ಬರು ಓಡಿ ಬಂದು ನೆಲಮಂಗಲ ನಗರ ಪೊಲೀಸರಲ್ಲಿ ವಿವಾಹ ಮಾಡಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಮಧ್ಯರಾತ್ರಿಯೇ ಪ್ರೇಮಿಗಳ ಅಳಲು ಕೇಳಿ ನಗರದ ಕವಾಡಿ ಮಠದ ರುದ್ರೇಶ್ವರ ದೇಗುಲದಲ್ಲಿ ಪೊಲೀಸರು ಜೋಡಿಗೆ ವಿವಾಹ ಮಾಡಿಸಿಕೊಟ್ಟಿದ್ದಾರೆ. ಜೊತೆಗೆ ನವದಂಪತಿಗೆ ಪೊಲೀಸರು ಆಶೀರ್ವಾದ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply