​​ಹ್ಯಾಟ್ಸಪ್ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ 

ಕೋರೋನಾ ಸಂಧರ್ಭದಲ್ಲಿ ತನ್ನ ಕರ್ತವ್ಯ​ ​ನಿಷ್ಠೆಯೊಡನೆ ಸೇವಾ ಮನೋಭಾವದಿಂದ ತೊಡಗಿಸಿ ಕೊಂಡಿರುವ  ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್  ಮಾದರಿ ಅಧಿಕಾರಿ ಎನಿಸಿದ್ದಾರೆ‌.​ 
ತನ್ನ ವಾಹನದಲ್ಲಿ ಒಂದಷ್ಟು ಆಹಾರ ಪೊಟ್ಟಣಗಳನ್ನು ಶೇಖರಿಸಿಟ್ಟುಕೊಂಡು ಅದನ್ನು ಅಶಕ್ತರಿಗೆ,​ ​ಹಸಿದವರಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.
 
ಜನಸಾಮಾನ್ಯರಿಗೆ ಕೋರೋನಾ ನಿಯಮಗಳ ಬಗ್ಗೆ ಎಚ್ಚರಿಕೆಯನ್ನು ನೀಡಿ ಅವರಿಗೆ ಮಾಸ್ಕ್ ,​ ​ಸ್ಯಾನಿಟೈಸರ್ ನೀಡಿ ಜಾಗೃತಿಯನ್ನು ಮೂಡಿಸುವ ವಿಶೇಷ ಕೆಲಸ​ ​ಮಾಡುತ್ತಿದ್ದಾರೆ.
ತನ್ನ ಶ್ರದ್ದಾ ಬದ್ಧತೆಯ ಸೇವಾ ಗುಣಗಳಿಗೆ ಈಗಾಗಲೇ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾಗಿರುವ ಶ್ರೀಯುತರು ಸಾಮಾಜಿಕ ಗುಣನಡತೆಯ ದಕ್ಷ ಅಧಿಕಾರಿಯಾಗಿದ್ದಾರೆ.
 
ಸಂಕಷ್ಟ,​ ​ಸವಾಲುಗಳನ್ನು ನಿಭಾಯಿಸುವಲ್ಲಿ ತನ್ನ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿ ರುವ ಶ್ರೀಯುತರು ಕಳೆದ ವರ್ಷದಂತೆ ಸದ್ರಿ ​​ದಿನದಲ್ಲೂ  ಕೋರೋನಾ ಸಂದರ್ಭದ ವಿಶೇಷ ಸೇವೆ ಶ್ಲಾಘನಾರ್ಹವಾದುದು.​ ​ಇಂತವರ ಸಂಖ್ಯೆ ಸಾವಿರವಾಗಲಿ.
 
 
 
 
 
 
 
 
 

Leave a Reply