ಕೋರೋನಾ ಸಂಧರ್ಭದಲ್ಲಿ ತನ್ನ ಕರ್ತವ್ಯ ನಿಷ್ಠೆಯೊಡನೆ ಸೇವಾ ಮನೋಭಾವದಿಂದ ತೊಡಗಿಸಿ ಕೊಂಡಿರುವ ಉಡುಪಿ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಮಾದರಿ ಅಧಿಕಾರಿ ಎನಿಸಿದ್ದಾರೆ.
ತನ್ನ ವಾಹನದಲ್ಲಿ ಒಂದಷ್ಟು ಆಹಾರ ಪೊಟ್ಟಣಗಳನ್ನು ಶೇಖರಿಸಿಟ್ಟುಕೊಂಡು ಅದನ್ನು ಅಶಕ್ತರಿಗೆ, ಹಸಿದವರಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.
ಜನಸಾಮಾನ್ಯರಿಗೆ ಕೋರೋನಾ ನಿಯಮಗಳ ಬಗ್ಗೆ ಎಚ್ಚರಿಕೆಯನ್ನು ನೀಡಿ ಅವರಿಗೆ ಮಾಸ್ಕ್ , ಸ್ಯಾನಿಟೈಸರ್ ನೀಡಿ ಜಾಗೃತಿಯನ್ನು ಮೂಡಿಸುವ ವಿಶೇಷ ಕೆಲಸ ಮಾಡುತ್ತಿದ್ದಾರೆ.
ತನ್ನ ಶ್ರದ್ದಾ ಬದ್ಧತೆಯ ಸೇವಾ ಗುಣಗಳಿಗೆ ಈಗಾಗಲೇ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾಗಿರುವ ಶ್ರೀಯುತರು ಸಾಮಾಜಿಕ ಗುಣನಡತೆಯ ದಕ್ಷ ಅಧಿಕಾರಿಯಾಗಿದ್ದಾರೆ.
ಸಂಕಷ್ಟ, ಸವಾಲುಗಳನ್ನು ನಿಭಾಯಿಸುವಲ್ಲಿ ತನ್ನ ಜವಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿ ರುವ ಶ್ರೀಯುತರು ಕಳೆದ ವರ್ಷದಂತೆ ಸದ್ರಿ ದಿನದಲ್ಲೂ ಕೋರೋನಾ ಸಂದರ್ಭದ ವಿಶೇಷ ಸೇವೆ ಶ್ಲಾಘನಾರ್ಹವಾದುದು. ಇಂತವರ ಸಂಖ್ಯೆ ಸಾವಿರವಾಗಲಿ.