ಅಪಘಾತಕ್ಕೀಡಾದ ಮಣಿಪಾಲದ ಉದ್ಯಮಿ ಸಾವು

ಮಣಿಪಾಲ: ಶುಕ್ರವಾರ ಬೆಳಿಗ್ಗೆ ನಡೆದಿದ್ದ ಸರಣಿ ಅಪಘಾತದಲ್ಲಿ ಮಣಿಪಾಲದ ಉದ್ಯಮಿಯೊರ್ವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿದ್ದಾರೆ.

ಸಾವನ್ನಪ್ಪಿದ ಉದ್ಯಮಿ ಕೆಎಂಸಿ ವಸತಿಗೃಹದ ನಿವಾಸಿ ವಾಮನ ನಾಯ್ಕ್ (58). ತನ್ನ ಸ್ಕೂಟರ್‌ನಲ್ಲಿ ಮೇ 28 ರಂದು ಕೆಳಪರ್ಕಳ ಕಡೆ ಹೋಗುತ್ತಿರುವಾಗ ಟೆಂಪೊ ಚಾಲಕನೊರ್ವ ಅತೀ ವೇಗವಾಗಿ ಬಂದು ವಾಮನ ನಾಯ್ಕ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದ.

ಡಿಕ್ಕಿ ರಭಸಕ್ಕೆ ಟೆಂಪೊ ನಾಯ್ಕ್ ರನ್ನು ಸ್ವಲ್ಪ ದೂರ ಸ್ಕೂಟರ್ ಸಹಿತ ಎಳೆದುಕೊಂಡು ಹೋಗಿತ್ತು, ನಂತರ ಮುಂದಿದ್ದ ಕಾರಿಗೂ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ವಾಮನ್ ಅವರ ಎರಡು ಕಾಲುಗಳ ಮೇಲೆ ಟೆಂಪೋದ ಚಕ್ರ ಹರಿದು ಜಖಂಗೊಂಡಿತ್ತು.

ಇಂದು ಚಿಕಿತ್ಸೆ ಫಲಕಾರಿಯಾದೆ ವಾಮನ್ ನಾಯ್ಕ್ ಮೃತ ಪಟ್ಟಿದ್ದಾರೆ. ಮೃತರ ಪತ್ನಿ ಕೆಎಂಸಿ ಆಸ್ಪತ್ರೆಯ ಉದ್ಯೋಗಿಯಾಗಿದ್ದು, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.ಅವರು ಹಣಕಾಸಿನ ವ್ಯವಹಾರ, ರಿಯಲ್ ಎಸ್ಟೆಟ್ ವ್ಯವಹಾರ ನಡೆಸುತ್ತಿದ್ದರು.ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ ಪ್ರಕಾಶ್ ಎಂಬಾತನ ಮೇಲೆ ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.

 

 

 
 
 
 
 
 
 
 
 
 
 

Leave a Reply