ಬ್ರಹ್ಮಾವರದಲ್ಲಿ  ರಸ್ತೆ ಅಪಘಾತಗೊಂಡು , ಮರಣಾನಂತರ  ಅಂಗದಾನದ ಮೂಲಕ ಸಾರ್ಥಕತೆ  ಮೆರೆದ ದಾನಿ

ಮಣಿಪಾಲ, 5ನೇ  ಏಪ್ರಿಲ್  2022: ಶ್ರೀ ಶ್ರೀನಿವಾಸರವರಿಗೆ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಬಳಿ   02.04.2022ರಂದು ಸಂಜೆ  4. 45 ಗಂಟೆಗೆ ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ   ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ  ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದ ಸಾಲಿಗ್ರಾಮ ನಿವಾಸಿ 19  ವರ್ಷ ಪ್ರಾಯದ ಶ್ರೀ ರಾಜು ನಾಯರಿ  ಇವರ  ಮಗನಾದ   ಶ್ರೀ ಶ್ರೀನಿವಾಸ   ಅವರು ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು.

 ನಮ್ಮ ವೈದ್ಯರು ಶ್ರೀನಿವಾಸ್  ಅವರನ್ನು  ರಕ್ಷಿಸಲು ಪ್ರಯತ್ನಿಸಿದರೂ,  ಅವರು  ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ . ಶ್ರೀ ಶ್ರೀನಿವಾಸ್  ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು  ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ  ಎಂದು ಘೋಷಿಸಿದರು. ಮೊದಲನೆಯದು 04.04.2022 ರಂದು ಸಂಜೆ  3.15ಕ್ಕೆ ಮತ್ತು ಎರಡನೆಯದು 05.04.2022 ರಂದು ಬೆಳಿಗ್ಗೆ  7.50 ಕ್ಕೆ. 

 

1994 ರ ಮಾನವ ಹಕ್ಕುಗಳ ಕಾಯಿದೆಯ 1994 ಪ್ರೋಟೋಕಾಲ್ಗಳು ಮತ್ತು  ಕಾರ್ಯವಿಧಾನಗಳ ಪ್ರಕಾರ, ತರುವಾಯ, ಶ್ರೀ ಶ್ರೀನಿವಾಸ್  ಅವರ ತಂದೆ ಶ್ರೀ ರಾಜು ನಾಯರಿ  ಅವರು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.  ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ  ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆದು  6 ಜನರ ಜೀವ ಉಳಿಸಲು ಸಹಾಯವಾಗಿದೆ.

 

ಜೀವನಸಾರ್ಥಕತೆ  ಪ್ರೋಟೋಕಾಲ್ಗಳು ಮತ್ತು ನಿರ್ಧಾರಗಳ ಪ್ರಕಾರ, ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾಗಳು ಮತ್ತು ಎರಡು ಮೂತ್ರಪಿಂಡ ಮತ್ತು ಚರ್ಮ ವನ್ನು ಕಸ್ತೂರ್ಬಾ  ಆಸ್ಪತ್ರೆ ಮಣಿಪಾಲದಲ್ಲಿ ರೋಗಿಗಳಿಗೆ ಬಳಸಲಾಯಿತು, ಯಕೃತ್ತು ಅನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

 

ಶ್ರೀನಿವಾಸ್ ಅವರ ತಂದೆಯಾದ ರಾಜು ನಾಯರಿ ಅವರು  “ಅಂಗದಾನ ಒಂದು ಪುಣ್ಯದ ಕೆಲಸ. ನನ್ನ ಮಗ   ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ  ” ಎಂದು ತಿಳಿಸಿದ್ದಾರೆ.  

 

ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ “ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು” ಎಂದು ತಿಳಿಸಿ ಅಂಗ ದಾನ ಮಾಡಲು  ನಿರ್ಧರಿಸಿದ  ಶ್ರೀನಿವಾಸ್   ಕುಟುಂಬಕ್ಕೆ ಕ್ರತಜ್ಞತೆ  ಸಲ್ಲಿಸಿದರು.  “ಮಾಧ್ಯಮಗಳು ಈ ವಿಷಯವನ್ನು ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರವಹಿಸಬೇಕು, ಇದು ಸಾರ್ವಜನಿಕರಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.

 
 
 
 
 
 
 
 
 
 
 

Leave a Reply