ಮೋದಿ ಬ್ರಿಗೇಡ್ ಪ್ರತಿಷ್ಠಾನ ಉಡುಪಿ ಜಿಲ್ಲೆ ವತಿಯಿಂದ ಹುಟ್ಟು ಹಬ್ಬದ ಕಾರ್ಯಕ್ರಮ

ಮೋದಿ ಬ್ರಿಗೇಡ್ ಪ್ರತಿಷ್ಠಾನ (ರಿ) ಕರ್ನಾಟಕ ಉಡುಪಿ ಜಿಲ್ಲೆ. ರಾಜ್ಯಾಧ್ಯಕ್ಷ ಶ್ರೀ ಗಣೇಶ್ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮ, ತಾರೀಖು 17.09.2022 ರಂದು ಮಂದಾರ್ತಿ ಶ್ರೀ ದುರ್ಗಾ ಸಭಾಂಗಣದಲ್ಲಿ ಉಚಿತ ನೇತ್ರಾ ತಪಾಸಣೆ, ಕನ್ನಡಕ ವಿತರಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಉಡುಪಿಯ ಪ್ರಸಾದ್ ನೇತ್ರಾಲಯ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಯ ಸಹಯೋಗದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ಇವರ ಆಶೀರ್ವಚನ ದೊಂದಿಗೆ ಉದ್ಘಾಟನೆ. ಡಾ. ಶಮಂತ್ ಯಸ್ ಶೆಟ್ಟಿ , ಅಧ್ಯಕ್ಷತೆ ಶ್ರೀ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಅತಿಥಿಗಳಾಗಿ ಶ್ರೀ ಧನಂಜಯ ಶೆಟ್ಟಿ ಆಡಳಿತ ಮೊಕ್ತೇಸರರು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಮಂದಾರ್ತಿ, ಶ್ರೀ ವಿಠ್ಠಲ್ ಶೆಟ್ಟಿ ಶೇಡಿಕೊಡ್ಲು, ಶ್ರೀಮತಿ ಶೋಭಾ ಬಲಿರಾಜ್ ಶೆಟ್ಟಿ, ಶ್ರೀಮತಿ ನೀತಾ ಪ್ರಭು, ಶ್ರೀ ಎಚ್. ಗಂಗಾಧರ್ ಶೆಟ್ಟಿ , ಶ್ರೀ ಗುರು ಪ್ರಸಾದ್, ಶ್ರೀ ಪ್ರವೀಣ್ ಶೆಟ್ಟಿ ವಂಡಾರು, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ , ಶ್ರೀ ವಿಖ್ಯಾತ್ ಶೆಟ್ಟಿ, ಶ್ರೀ ಗಣೇಶ್ ಶೆಟ್ಟಿ, ಶ್ರೀ ಅಮರ್ ಶೆಟ್ಟಿ, ಶ್ರೀ ಅನಿಲ್ ಶೆಟ್ಟಿ ಪಿ ಡಿ ಒ, ಶ್ರೀಮತಿ ವೇದಾವತಿ ಹೆಗ್ಡೆ ಹಾಗೂ ಮೋದಿ ಬ್ರಿಗೆಡ್ ನ ಜಿಲ್ಲಾ ಪದಾಧಿಕಾರಿಗಳು, ಯುವ ಘಟಕದ ಅಧ್ಯಕ್ಷರು, ಮಹಿಳಾ ಘಟಕ ಸದಸ್ಯರು ಹಾಗೂ ಬ್ರಿಗೇಡ್ ನ ಎಲ್ಲಾ ಸದಸ್ಯರು, ಸ್ಥಳೀಯ ಜಿಲ್ಲಾ, ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತೂ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಗಣೇಶ್ ಪಾಟೀಲ್, ಕಾರ್ಯದರ್ಶಿ, ಕಾರ್ಯ ಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply