ಉಡುಪಿ ನಗರಸಭೆ ವ್ಯಾಪ್ತಿಯ ಇಂದಿರಾನಗರ ವಾರ್ಡ್ ನ ಮಂಚಿಕೋಡಿ ಪೋಸ್ಟ್ ಆಫೀಸ್ ನ ಹಿಂದಿನ ಮಣ್ಣಿನ ರಸ್ತೆ, ಪ್ರತಿ ಮಳೆಗಾಲದಲ್ಲಿ ಸುಮಾರು ಒಂದು ಕಿ.ಮಿ ರಸ್ತೆಯ ಅವ್ಯವಸ್ಥೆಯನ್ನು ಜನಪ್ರತಿನಿದಿಗಳಿಗೆ ಗಮನಕ್ಕೆ ತಂದರೂ ಈ ತನಕ ಸಿಕ್ಕಿದ್ದು ಭರವಸೆ ಮಾತ್ರ.
ಈ ಪರಿಸರದಲ್ಲಿ ಸುಮಾರು 40 ಮನೆಗಳಿದ್ದು ಶಾಲಾ ಮಕ್ಕಳು ಮುಖ್ಯ ರಸ್ತೆವರೆಗೆ ನಡೆದುಕೊಂಡು ಹೂಗಬೆಕಾದ ಪರಿಸ್ಥಿತಿ ಮತ್ತು ನಾಗರಿಕರ ವಾಹನ ಕೂಡಾ ಮಳೆಗಾಲ ಮಗಿಯುವ ವರೆಗೆ ಮಖ್ಯರಸ್ತೆಯ ಪಕ್ಕದಲ್ಲಿ ಜಾಗದಲ್ಲಿ ನಿಲ್ಲಿಸಿ ಬರಬೆಕಾದ ಪರಿಸ್ಥಿತಿ.
ಚುನಾವಣೆ ಸಂದರ್ಭ ಆಶ್ವಾಸನೆಗಳ ಮಹಾಪೂರವೇ ಹರಿದು ಬರುತ್ತದೆ. ಸದ್ಯಕಂತೂ ಇಲ್ಲನ ಪರಿಸ್ಥಿತಿ ಹೇಳತೀರದು. ರಾಜಕೀಯ ನಾಯಕರು ಹಾಗು ಅಧಿಕಾರಿಗಳು ಜಾಣ ಕುರುಡರಾಗಿ ಬಿಟ್ಟಿದ್ದಾರೆ.