ನೀರು ಪಾಲಾಗುತ್ತಿದ್ದ ಬೆಂಗಳೂರಿನ ಪ್ರವಾಸಿಗರ ರಕ್ಷಣೆ

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ಇಂದು ಬೆಂಗಳೂರು ಮೂಲದ ಪ್ರವಾಸಿಗರ ತಂಡ ಈಜಲು ಹೋಗಿ ಮುಳುಗಿದ ಘಟನೆ ನಡೆಯಿತು   ಇದನ್ನು ಗಮನಿಸಿದ ಜಸ್ಕಿ ಬೋಟ್ ಮತ್ತು ಪ್ರವಾಸಿಗರ ಬೋಟಿನ ಚಾಲಕರು ಕೂಡಲೇ ಅವರನ್ನು  ರಕ್ಷಿಸಿದ್ದಾರೆ.
ಅದರಲ್ಲಿ ಯುವಕ ಸುಹಾಸ್ (೨೦)ಹಾಗೂ ಯುವತಿ ರಮ್ಯ (೨೮)  ಗಂಭೀರಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.  ಮಲ್ಪೆ ಬೀಚ್ ನ ಸ್ಥಳೀಯರ ಸಮಯ ಪ್ರಜ್ಞೆಯಿಂದ ಐದು ಜನ ಅಪಾಯದಿಂದ ಪಾರಾಗಿದ್ದು, ಸದ್ಯ ಮಲ್ಪೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
 
 
 
 
 
 
 
 
 

Leave a Reply