ಜನವರಿ, 8 ರಂದು ಆರ್‌ಬಿಐ ನಿದೇರ್ಶಕ ಸತೀಶ್ ಮರಾಠೆರೊಂದಿಗೆ ಸಂವಾದ ಕಾರ್ಯಕ್ರಮ

ಮಹಾಲಕ್ಷ್ಮೀ  ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ ಆಶ್ರಯದಲ್ಲಿ “ “ Present Economy and Banking Scenario in India” ವಿಷಯದ ಬಗ್ಗೆ ಭಾರತೀಯರಿಸರ್ವ್ ಬ್ಯಾಂಕಿನ ನಿರ್ದೇಶಕ  ಸತೀಶ್ ಮರಾಠೆ ಯವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಜನವರಿ 08,2021ನೇ ಶುಕ್ರವಾರ  ಸಂಜೆ 4 ಗಂಟೆಗೆಉಡುಪಿಯ ಡಯಾನ ಹೊಟೇಲ್ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ  ಸತೀಶ್ ಮರಾಠೆಯವರು ಸಂವಾದ ನಡೆಸಲಿದ್ದು, ಕೊರೋನ ಮಹಾಮಾರಿಯ ಪರಿಣಾಮದಿಂದ ದೇಶದ ಬ್ಯಾಂಕಿಂಗ್  ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಹಾಗೂ ದೇಶದ ಆರ್ಥಿಕತೆಯ ಮೇಲಿನ ಪರಿಣಾಮಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಈ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ವೈದ್ಯರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಚೇಂಬರ್ ‌ಆಫ್‌ಕಾಮರ್ಸ್, ಆದಾಯ ತೆರಿಗೆ ಇಲಾಖೆ, ಸಹಕಾರಿ ಮುಖಂಡರು, ಬ್ಯಾಂಕಿಂಗ್, ಶಿಕ್ಷಣ ಸಂಸ್ಥೆ, ರಿಯಲ್‌ ಎಸ್ಟೇಟ್, ಜ್ಯುವೆಲ್ರ‍್ಸ್, ವಕೀಲರು, ಚಾರ್ಟೆಡ್‌ಅಕೌಂಟೆಟ್, ಮತ್ಸೊದ್ಯಮಿಗಳು, ಮಾಧ್ಯಮ, ಪ್ರವಾಸೋದ್ಯಮ, ಹೊಟೇಲ್, ಸಾರಿಗೆ, ಇಂಜಿನಿಯರ್ ಅಸೋಸಿಯೇಶನ್ ಮೊದಲಾದ ಹಲವು ಕ್ಷೇತ್ರದಗಣ್ಯರು ಭಾಗವಹಿಸ ಲಿರುವುದಾಗಿಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply