​ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ​ನಿಂದ ಎಕ್ಸ್ಪ್ರೆಸ್ ಸಾಲ:ಯಶ್‌ಪಾಲ್ ಸುವರ್ಣ

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ​ನಿಂದ ​ಕೊರೋನ ಸಂಕಷ್ಟಕ್ಕೀಡಾದ ಸಣ್ಣ ಉದ್ದಿಮೆದಾರರಿಗೆ ಎಕ್ಸ್ಪ್ರೆಸ್ ಸಾಲ ಯೋಜನೆ : ಯಶ್‌ಪಾಲ್ ಸುವರ್ಣ.

ಕೊರೋನಾ ಮಹಾಮಾರಿಯ ಪರಿಣಾಮದಿಂದ ವ್ಯವಹಾರಿಕ ಹಿನ್ನಡೆಯಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ​ನಿಂದ   ಅರ್ಹ ಗ್ರಾಹಕರಿಗೆ ಭದ್ರತೆ​ ​ರಹಿತ ಎಕ್ಸ್ಪ್ರೆಸ್ ಸಾಲ ಯೋಜನೆಯನ್ನು ರೂಪಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ನೀಡಿದ್ದ ​6 ತಿಂಗಳ ಮಾರಟೋರಿಯಂ ಅವಧಿ ಆಗಸ್ಟ್ ​31 ಕ್ಕೆ ಅಂತ್ಯ​ಗೊಂಡಿದ್ದು,  ಸೆಪ್ಟೆಂಬರ್ ತಿಂಗಳಿ​ನಿಂದ  ಗ್ರಾಹಕರು ಸಾಲದ ಕಂತು ಪಾವತಿಸಬೇಕಾಗಿದೆ. ಈ ಸಂದರ್ಭದಲ್ಲಿ ಸಣ್ಣ ಉದ್ದಿಮೆದಾರರಿಗೆ, ಮೀನುಗಾರರಿಗೆ ಆರ್ಥಿಕವಾಗಿ ಶಕ್ತಿತುಂಬುವ ನಿಟ್ಟಿನಲ್ಲಿ ಈ ಸಾಲ ಯೋಜನೆ ಆರಂಭಿಸಲಾಗಿದ್ದು, ಈ ಎಕ್ಸ್ಪ್ರೆಸ್ ಸಾಲ ಯೋಜನೆಯಲ್ಲಿ ಅರ್ಹ ಗ್ರಾಹಕರಿಗೆ ​2 ಲಕ್ಷ ರೂಪಾಯಿ ವರೆಗೆ ಮಾಸಿಕ ​1.30​% ಬಡ್ಡಿದರದಲ್ಲಿ ಭದ್ರತೆರಹಿತವಾಗಿ ಕೇವಲ ​180 ನಿಮಿಷದಲ್ಲಿ ಸಾಲ  ಮಂಜೂರು ಮಾಡಲಾಗುವುದು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ​ನಿಂದ  ​8ಶಾಖೆಗಳ ಮೂಲಕ ​25 ಸಾವಿರ ಗ್ರಾಹಕರು ವ್ಯವಹಾರ ನಡೆಸುತ್ತಿದ್ದಾರೆ.  ಈ ಸಾಲ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಶಾಖಾ ಪ್ರಬಂಧಕರನ್ನು ಸಂಪರ್ಕಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply