ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ನಿಧನ

ಬೆಂಗಳೂರು:ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊಫೆಸರ್ ಎಂ. ಎ. ಹೆಗಡೆ ಇಂದು ನಿಧನರಾದರು.

ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ನಿವೃತ್ತ ಪ್ರಾಂಶುಪಾಲರು, ಬಹುಶ್ರುತ ವಿದ್ವಾಂಸರಾದ,ನೇರ ನುಡಿಯ ಸಜ್ಜನರಾದ ಹೆಗಡೆಯವರು ಇಂದು ಬೆಳಿಗ್ಗೆ 7.30ಕ್ಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು.ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗ ಗಾಢ ಸಂತಾಪ ವ್ಯಕ್ತಪಡಿಸಿದೆ.

 
 
 
 
 
 
 
 
 

Leave a Reply