ಮೆಟ್ಟಿಲಿಂದ ಉರುಳಿದ ಲಾಲೂ ಪ್ರಸಾದ್ ಯಾದವ್

ಜಾಮೀನಿನ ಮೇಲೆ ಬಿಡುಗಡೆಗೊಂಡು ತಮ್ಮ ಪತ್ನಿಯವರ ನಿವಾಸದಲ್ಲಿ ಕಾಲಕಳೆಯುತ್ತಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮೆಟ್ಟಿಲುಗಳಿಂದ ಕೆಳಗುರುಳಿ ಗಂಭೀರ ಗಾಯಗೊಂಡಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಲಾಲೂ ಅವರಿಗೆ ಭುಜದಲ್ಲಿ ಮುರಿತ ಉಂಟಾಗಿದ್ದು, ಬೆನ್ನಿಗೂ ಗಾಯಗಳಾಗಿವೆ. ಪಾಟ್ನಾದ ಸರ್ಕ್ಯುಲರ್ ರಸ್ತೆಯ 10 ರಲ್ಲಿ ತಮ್ಮ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.

ಲಾಲೂ ಪ್ರಸಾದ್ ಭುಜದಲ್ಲಿ ಮುರಿತವಾಗಿರುವುದು ಪರೀಕ್ಷೆಗಳಿಂದ ಗೊತ್ತಾಗಿದೆ. ಭುಜ ಹೊಂದಿಕೊಳ್ಳಲೆಂದು ಕ್ರೇಪ್ ಬ್ಯಾಂಡೇಜ್ ಅನ್ನು ಕಟ್ಟಲಾಗಿದೆ. ಕೆಲ ಔಷಗಳನ್ನು ನೀಡಿ ಮರಳಿ ಮನೆಗೆ ಕಳುಹಿಸಲಾಗಿದೆ’ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ವಯೋಸಹಜವಾದ ಆರೋಗ್ಯ ತೊಂದರೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್, ಕಿಡ್ನಿ ಸಮಸ್ಯೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಈ ನಡುವೆ ಅವರಿಗೆ ಮತ್ತೊಂದು ಆಘಾತ ಸಿಕ್ಕಿದೆ.

ಮೇವು ಹಗರಣದಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಲಾಲು ಅವರು ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

 
 
 
 
 
 
 
 
 

Leave a Reply