ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ವತಿಯಿಂದ “ಗೋ ಶಾಲೆಗೆ ಹಸಿ ಹುಲ್ಲು ಸಮರ್ಪಣೆ”

ಸ್ಥಳಿಯ ಕೋಟೇಶ್ವರ ಹೂವಿನಕೆರೆ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಕಾಮದೇನು ಗೋ ಸಂರಕ್ಷಣಾ ಕೇಂದ್ರಕ್ಕೆ ಒಂದು ಟಿಪ್ಪರ್ ಲೋಡು ಹಸಿ ಹುಲ್ಲು ಹಾಗೂ ನೀಲಾವರ ಗೋ ಶಾಲೆಗೆ ಒಂದು ಟಿಪ್ಪರ್ ಲೋಡ್ ಹಸಿ ಹುಲ್ಲನ್ನು ಕಟಾವುಮಾಡಿ ಗೋ ಶಾಲೆಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಕುಂದಾಪುರ ಮಂಡಲ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ, ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿ ಚೇತನ್ ಬಂಗೇರ, ಉಪಾಧ್ಯಕ್ಷ ಅಭಿಷೇಕ್ ಅಂಕದಕಟ್ಟೆ, ಕಾರ್ಯದರ್ಶಿ ಸಂತೋ಼ಷ್ ಪೂಜಾರಿ ತೆಕ್ಕಟ್ಟೆ, ದೀಕ್ಷಿತ್ ಶೆಟ್ಟಿ ಗುಡ್ಡೆಯಂಗಡಿ, ಅರುಣ್ ಕುಮಾರ್ ಕುಂದಾಪುರ, ಕಾರ್ಯಕಾರಿಣಿ ಸದಸ್ಯರಾದ ಕೋಟಿ ಪೂಜಾರಿ ಕೋಟ, ಸತ್ಯ ತಿಂಗಳಾಯ ಬೀಜಾಡಿ,ರವೀಂದ್ರ ಮಂದಾರ್ತಿ, ಪ್ರಮುಖರಾದ ರಾಮಚಂದ್ರ ಆಚಾರ್ ತೆಕ್ಕಟ್ಟೆ, ಸತ್ಯಾನಂದ ಪಡುಕೆರೆ,ಗಣಪತಿ,ಗಿರೀಶ್ ಮತ್ತಿತರು ಉಪಸ್ಥಿತರಿದ್ದರು

 
 
 
 
 
 
 
 
 

Leave a Reply