ದ.ಕ ಜಿಲ್ಲೆಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾಗಿ ಕುಮಾರ್ ಚಂದ್ರ ‌ಅಧಿಕಾರ‌ ಸ್ವೀಕಾರ

ದ.ಕ ಜಿಲ್ಲೆಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾಗಿ ಕುಮಾರ್ ಚಂದ್ರ ‌ಅಧಿಕಾರ‌ ಸ್ವೀಕರಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವ ಕುಮಾರ್ ಚಂದ್ರ ಅವರು ಒಬ್ಬ ದಕ್ಷ ಪ್ರಾಮಾಣಿಕ ಮಾತ್ರವಲ್ಲ ಸಜ್ಜನ ಪೊಲೀಸ್ ಅಧಿಕಾರಿಯಾಗಿದ್ದಾರೆ. 

ಇವರು ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ಸೇನೆಯಲ್ಲಿ ಹಲವಾರು ವರುಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. 

ದಕ್ಷ ಅಧಿಕಾರಿಯ ಆಗಮನದಿಂದ ಸಹಜವಾಗಿಯೇ ಜನಸಾಮಾನ್ಯರು ಸೇರಿದಂತೆ ಸಾರ್ವಜನಿಕರ ನಿರೀಕ್ಷೆಗಳು ಹೆಚ್ಚಾಗಿದ್ದು, ಉತ್ತಮ‌ ಆಡಳಿತ ನೀಡುವ ಮಹತ್ವದ ಜವಾಬ್ದಾರಿಯನ್ನು ಕುಮಾರ್ ಚಂದ್ರ ಅವರು ನಿಭಾಯಿಸಲಿ. 

 
 
 
 
 
 
 
 
 
 
 

Leave a Reply