ರಾಜಪುರ ಸಾರಸ್ವತ ಸಮಾಜ ಸೇವಾ ಸಂಘ ಕುಕ್ಕೆಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಯೋಗದಲ್ಲಿ ನರಸಿಂಹ ಪ್ರತಿಷ್ಠಾನ ಬೆಳ್ಳಂಪಳ್ಳಿ ಉದ್ಘಾಟನಾ ಸಮಾರಂಭ ಹಾಗೂ ಕಲಾರ್ಘ್ಯ ಕಾರ್ಯಕ್ರಮ ಕುಕ್ಕೆಕಟ್ಟೆ ಬೆಳ್ಳಂಪಳ್ಳಿ ಜೈ ಹಿಂದ್ ಶಾಲೆ ಎದುರು ನರಸಿಂಹ ವೇದಿಕೆಯಲ್ಲಿ ಶನಿವಾರ ನಡೆಯಿತು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಉದ್ಘಾಟಿಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಕುಕ್ಕೆಹಳ್ಳಿ ಗ್ರಾ.ಪಂ. ಪುರಂದರ ಕೋಟ್ಯಾನ್, ರಾಜಪುರ ಸಾರಸ್ವತ ಸಮಾಜ ಸೇವಾ ಸಂಘ ಅಧ್ಯಕ್ಷ ಸುಂದರ ಪ್ರಭು, ಹಂಸ ಚೈತನ್ಯ ಸೌಹಾರ್ದ ಸಹಕಾರಿ ಸುದೀಶ್ ನಾಯಕ್, ನರಸಿಂಹ ಪ್ರತಿಷ್ಠಾನ ಗೌರವಾಧ್ಯಕ್ಷ ಸರಸ್ವತಿ ಎನ್. ಪ್ರಭು ಉಪಸ್ಥಿತರಿದ್ದರು.
ಪ್ರತಿಷ್ಠಾನ ಆಶ್ರಯದಲ್ಲಿ ಕಲಾರ್ಘ್ಯ ತರಗತಿಗಳು ಆರಂಭವಾಗಲಿದೆ.