ಕೋಟ- ಸಿಬ್ಬಂದಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ ಮತ್ತು ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ
,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.
ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಸಹಕಾರಿ
ಯೂನಿಯನ್, ಉಡುಪಿ ಇವರ ಜಂಟಿ ಆಶ್ರಯದಲ್ಲಿ
ಸಂಘದ ಸಿಬ್ಬಂದಿಯವರಿಗೆ ವ್ಯಕ್ತಿತ್ವ ವಿಕಸನ
ತರಬೇತಿ ಕಾರ್ಯಾಗಾರ ಮತ್ತು ಸಂಘದ
ಸೇವೆಯಿoದ ಇತ್ತೀಚೆಗೆ ನಿವೃತ್ತರಾಗಿರುವ
ವ್ಯವಸ್ಥಾಪಕ ಎಮ್. ಶ್ರೀಧರ ಆಚಾರಿ ಇವರಿಗೆ ಆಡಳಿತ
ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನ
ಹಾಗೂ ಬೀಳ್ಕೊಡುಗೆ ಸಮಾರಂಭ ಜು. ೧೧
ರಂದು ಶನಿವಾರ ಮಣೂರು ರಾಜಲಕ್ಷಿ÷್ಮ ಸಭಾ
ಭವನ, ಇಲ್ಲಿ ಜರಗಿತು.
ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ
ಶೆಟ್ಟಿ ಇಂದ್ರಾಳಿ ಇವರು ತರಬೇತಿ
ಕಾರ್ಯಾಗಾರವನ್ನು ದೀಪ ಬೆಳಗುವ ಮೂಲಕ
ಉದ್ಘಾಟಿಸಿ ಮಾತನಾಡಿ ಸಂಘದ ಕಾರ್ಯ
ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬ್ರಹ್ಮಾವರ
ವಲಯದ ಮೇಲ್ವಿಚಾರಕ ರಾಜಾರಾಮ ಶೆಟ್ಟಿ,
ಪ್ರಜ್ಞಾ ವಿದ್ಯಾ ಸಂಸ್ಥೆ ಕೋಟ ಇದರ ಪ್ರಾಂಶುಪಾಲ
ಪ್ರಕಾಶ್ ಭಟ್, ಸಂಘದ ನಿವೃತ್ತ
ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಶೋಭಾ,
ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎ. ಎಸ್.
ಎನ್. ಅಲ್ಸೆ, ನಿವೃತ್ತ ವ್ಯವಸ್ಥಾಪಕ ಆನಂದ ಪೂಜಾರಿ,
ಸಂಘದ ಉಪಾಧ್ಯಕ್ಷರಾದ ಜಿ. ರಾಜೀವ
ದೇವಾಡಿಗ, ನಿರ್ದೇಶಕರಾದ, ಉದಯ ಕುಮಾರ

ಶೆಟ್ಟಿ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ಎಚ್.
ನಾಗರಾಜ ಹಂದೆ, ಗೀತಾ ಶಂಭು ಪೂಜಾರಿ, ಪ್ರೇಮಾ
ಎಸ್. ಪೂಜಾರಿ, ಕುಮಾರಿ ರಶ್ಮಿತಾ, ನಾಮನಿರ್ದೇಶಿತ
ನಿರ್ದೇಶಕಿ ಗುಲಾಬಿ ಬಂಗೇರ ಕಾರ್ಯಕ್ರಮದಲ್ಲಿ
ಸಂಘದ ನಿವೃತ್ತ ಮತ್ತು ಹಾಲಿ ಸಿಬ್ಬಂದಿಯವರು,
ಸAಘದ ಗ್ರಾಹಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಘದಲ್ಲಿ ವಿವಿಧ
ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇತ್ತೀಚಿಗೆ
ನಿವೃತ್ತರಾದ ವ್ಯವಸ್ಥಾಪಕ ಎಮ್. ಶ್ರೀಧರ ಆಚಾರ್
ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕುಮಾರ್
ಇವರು ನಿವೃತ್ತರ ಕುರಿತು ತಮ್ಮ
ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕ ಟಿ. ಮಂಜುನಾಥ ಸ್ವಾಗತಿಸಿ
ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ
ಸಿಬ್ಬoದಿ ಶಾಲಿನಿ ಹಂದೆ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್
ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಸಭಾ
ಕಾರ್ಯಕ್ರಮದ ನಂತರ ಸಂಘದ
ಸಿಬ್ಬoದಿಯವರಿಗೆ ವ್ಯಕ್ತಿತ್ವ ವಿಕಸನ ತರಬೇತಿ
ಕಾರ್ಯಾಗಾರ ನಡೆಯಿತು.

 
 
 
 
 
 
 
 
 
 
 

Leave a Reply