ಗೆಳೆಯರ ಬಳಗ ವತಿಯಿಂದ ಆಟಿದೊಂಜಿ ದಿನ

ಕೊಡವೂರು ಗೆಳೆಯರ ಬಳಗ (ರಿ.) ಗರ್ಡೆ ಲಕ್ಷ್ಮೀ ನಗರ ವತಿಯಿಂದ  ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮವು ಕೊಡವೂರು ಕೃಷ್ಣಪ್ಪ ಕಾಂಪ್ಲೆಕ್ಸ್ ನಲ್ಲಿ 24-07-2022 ಭಾನುವಾರ ನಡೆಯಿತು. ಆಟಿ ತಿಂಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಕುದಿ ಶ್ರೀ ವಸಂತ ಶೆಟ್ಟಿ ನೀಡಿದರು.

ಈ ಸಂದರ್ಬದಲ್ಲಿ ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು, ಗೆಳೆಯರ ಬಳಗದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿಗಾರ್, ಪ್ರೇಮ ದಯಾನಂದ್ ಅಧ್ಯಕ್ಷರು ಮಹಿಳಾ ಮಂಡಳಿ ಗರ್ಡೆ, ಲಕ್ಷ್ಮೀ ನಗರ, ವಿನೋದ ಶೆಟ್ಟಿ, ಮಮತಾ ಶೆಟ್ಟಿ ಸಮಾಜಸೇವಕ, ಬಾ ಸಾಮಗ ಹಿರಿಯ ಪತ್ರಕರ್ತರು, ಇನ್ನಿತರರು ಉಪಸ್ಥಿತರಿದ್ದರು.

ಅಮಿತ್ ಕುಮಾರ್ ಸ್ವಾಗತವನ್ನು ಮಾಡಿ,  ಪ್ರಶಾಂತ್ ಕುಂದರ್ ಧನ್ಯವಾದವನ್ನು ಸಲ್ಲಿಸಿದರು.

 
 
 
 
 
 
 
 
 

Leave a Reply