ಜನನಾಯಕನ ಸೇವೆ ಹೀಗಿರಬೇಕು..

ಮೂರನೇ ಹಂತದ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಆಶೀರ್ವಾದ್, ಉದ್ದಿನ ಹಿತ್ಲು,ತೊಟ್ಟಂ (3.5 ಕಿ ಮೀ) ಮಾರ್ಗವು ಸುಮಾರು 305 ಲಕ್ಷ ರೂಪಾಯಿಗಳ (ಅಂದಾಜು) ಅನುದಾನದಲ್ಲಿ ನಿರ್ಮಾಣ ಆಗಲಿರುವ ಕಾಂಕ್ರೀಟ್ ರಸ್ತೆಯ ಟೆಂಡರ್ ಅವಧಿಯು 09-08-2021 ರಿಂದ 09-07-2022 ರವರೆಗೆ ಇದ್ದು ಮುಂದಿನ 5 ವರ್ಷಗಳ ನಿರ್ವಹಣೆಯ ಜವಬ್ದಾರಿಯೂ ಗುತ್ತಿಗೆದಾರರಾಗಿರುತ್ತದೆ.

ಗುತ್ತಿಗೆದಾರರು ಮಳೆಗಾಲದ ಕುಂಟು ನೆಪ ಹೇಳಿ ಕಾಮಗಾರಿಯನ್ನು ಮುಂದೂಡುತ್ತಾ ಬಂದಿದ್ದು, ಇದು ಪರಿಸರದ ಜನರಿಗೆ ಬಹಳ ತೊದರೆಯನ್ನುಂಟು ಮಾಡುತ್ತಿದೆ.

ಆನೇಕ ಬಾರಿ ಗುತ್ತಿಗೆದಾರರಲ್ಲಿ ಮನವಿ ಮಾಡಿದಾಗಲೂ ಏನಾದರೊಂದು ನೆಪ ಹೇಳುತ್ತಾ ಕಾಮಗಾರಿಯನ್ನು ಮುಂದೂಡುತ್ತಾ, ಬೇಜವಾಬ್ದಾರಿಯಿಂದ ಕೇವಲ ಕಾಲಹರಣ ಮಾಡುತ್ತಿದ್ದರು.

 

ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಉಡುಪಿ ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಊರಿನ ಹಿರಿಯರೊಂದಿಗೆ ಗುತ್ತಿಗೆದಾರರ ಮನೆಗೆ ಹೋಗಿ ಕಾಮಗಾರಿಯನ್ನು ಕೂಡಲೇ ಮುಗಿಸಬೇಕು ಎಂದು ತಿಳಿಸಲಾಯಿತು.

ಬಾಕಿ ಇರುವ ಕೆಲಸಗಳ ಮಾಹಿತಿ ನೀಡಿ ಜನರಿಗಾಗುವ ತೊಂದರೆಯನ್ನು ವಿವರಿಸಿ, ಗುತ್ತಿಗೆದಾರರನ್ನು ಕಾಮಗಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ, ಕಾಮಗಾರಿಗಳ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಮನವರಿಕೆ ಮಾಡಲಾಯಿತು.

ಇದರ ಫಲಶೃತಿಯಾಗಿ ಮರುದಿನವೇ ಕಾಮಗಾರಿಗೆ ಚಾಲನೆ ದೊರೆತಿದೆ.

ವಿಜಯ ಕೊಡವೂರು ಇವರ ಈ ಕೆಲಸಕ್ಕೆ ಗ್ರಾಮಸ್ಥರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply