ಕಾರ್ಕಳ ಎಮ್. ಪಿ.ಎಮ್. ನಲ್ಲಿ ಐ. ಕ್ಯೂ. ಎ. ಸಿ. ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ :ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ಮತ್ತು ಮಾನವೀಯ ಚಟುವಟಿಕೆ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮ.ಡಿ.16ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಸಂಜೀವ ವಡ್ಸೆ ಯವರು ಆಗಮಿಸಿ,ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ತೃತೀಯಲಿಂಗಿಯರು ಮತ್ತು ಮಂಗಳಮುಖಿಯರು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಹೇಳಿಕೊಂಡರು, ಸಮಾಜದಲ್ಲಿನ ಜನರು ಅವರನ್ನು ಕಾಣುವ ರೀತಿ ಮತ್ತು ಅದಕ್ಕೆ ಸೂಕ್ತ ಬದಲಾವಣೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ಹಲವಾರು ವಿಷಯಗಳು ತಿಳಿದಾಗ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮೂಡುವುದು ಸಹಜ ಅಂತಹ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ವರ್ಮಾ ಅಜ್ರಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಐ.ಕ್ಯೂ.ಎ.ಸಿ ಸಂಚಾಲಕಿ ಜ್ಯೋತಿ ಎಲ್ ಜನ್ನೇ ಮತ್ತು ಮಾನವಿಕ ಸಂಘದ ಸಂಚಾಲಕ ಕಿರಣ್ ಹಾಗೂ ವಿದ್ಯಾರ್ಥಿ ನಾಯಕ ಸಿಲ್ವಿಯ ಮತ್ತು ಯಮುನಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಕಾವ್ಯ ಪ್ರಾಥನೆ ಮಾಡಿದರು, ಯಮುನಪ್ಪ ಅತಿಥಿ ಪರಿಚಯ ಮಾಡಿದರು.ಗಣೇಶ್ ಸ್ವಾಗತಿಸಿ, ಸಿಲ್ವಿಯಾ ವಂದಿಸಿದರು. ನಿವೇದಿತಾ ಶೆಟ್ಟಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply