ಕೊಡವೂರು ಬ್ರಾಹ್ಮಣ ಮಹಾ ಸಭಾ: 2022 ರ ದಿನದರ್ಶಿಕೆ ಬಿಡುಗಡೆ

ಕೊಡವೂರು ಬ್ರಾಹ್ಮಣ ಮಹಾ ಸಭಾದ ವತಿಯಿಂದ ಹೊಸ ವರುಷದ ದಿನದರ್ಶಿಕೆ ಯನ್ನು ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯರು ವಿಪ್ರಶ್ರೀಯಲ್ಲಿ ಬಿಡುಗಡೆಗೊಳಿಸಿದರು.

ಪ್ರಥಮ‌ ಪ್ರತಿಯನ್ನು ದಿನದರ್ಶಿಕೆ ವಿನ್ಯಾಸಗೊಳಿಸಿದ ‌ಪೂರ್ಣಿಮಾ ಜನಾರ್ದನ್ ರವರಿಗೆ ನೀಡಲಾಯಿತು. ಕೊಡವೂರು ಬ್ರಾಹ್ಮಣ ಮಹಾ ಸಭಾದ ರಜತೋತ್ಸವದ ಅಂಗವಾಗಿ ಸರಣಿ 33 ರ ಕಾರ್ಯಕ್ರಮವಾಗಿ ಮೂಡಿಬಂದ ಈ ಸಮಾರಂಭದಲ್ಲಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಸಂಶೋಧಕ ಶ್ರೀಕಾಂತ ಆಚಾರ್ಯ, ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಗೌರವಾಧ್ಯಕ್ಷ ಪಿ ಗುರುರಾಜ್ ರಾವ್ ಹಾಗು ರಜತೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply