ಭಾರತ ಯಾವ ದೇಶಕ್ಕೂ ಆಕ್ರಮಣ ಮಾಡಿಲ್ಲ ಈ ವಿಷಯ ನಮ್ಮ ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ನಮ್ಮ ದೇಶದ ಸೇನೆಯಲ್ಲಿ ಕೆಲಸ ಮಾಡುವಂತಹ ಪಡೆಗಳ ಶೌರ್ಯವನ್ನು ನಾವು ಕಾಲಕಾಲಕ್ಕೆ ಇಂತಹ ಕಾರ್ಯಕ್ರಮದ ಮುಖಾಂತರ ತಿಳಿಸುವಂತಹ ಕಾರ್ಯ ಅವಶ್ಯಕತೆ ಇದೆ, ಇದನ್ನು ತಿಳಿಸಿದರೆ ಮುಂದಿನ ಪೀಳಿಗೆಗೂ ದೇಶ ಭಕ್ತಿ ಬರುವ ಸಾಧ್ಯತೆ ಇದೆ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಕಾರ್ಗಿಲ್ ದಿನಾಚರಣೆಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಪೆ ಮೆಸ್ಕಾಂ ಅಧಿಕಾರಿ ಕೃಷ್ಣ ಮೂರ್ತಿ, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೊಡವೂರು, ಅಜಿತ್ ಕೊಡವೂರು ಉಪಸ್ಥಿತರಿದ್ದರು. ವಿನಯ್ ಗರ್ಡೆ ಸ್ವಾಗತಿಸಿ ಧನ್ಯವಾದವಿತ್ತರು