ಕರಾವಳಿ ಕರ್ನಾಟಕದ ಭಾಗದ ಜನರಿಗೆ ಕೃಷಿ ಎಂಬುದು ಜೀವನದ ಒಂದು ಅಂಗ. ಆದರೆ ಕೃಷಿ ಉತ್ಪನ್ನ ಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಸಂಸ್ಥೆಯು ಈ ಬಗ್ಗೆ ಆಸಕ್ತಿ ವಹಿಸಿ ಕೃಷಿಗೆ ಸಂಬಂಧಪಟ್ಟ ಹಲವು ಉದ್ದೇಶಗಳನ್ನು ಹೊಂದಿದೆ. ಈ ಸಂಸ್ಥೆಯ ಚಟುವಟಿಕೆಗಳ ಮೊದಲ ಹೆಜ್ಜೆಯಾಗಿ ಒಂದು ವಾಣಿಜ್ಯಮಳಿಗೆಯನ್ನು 18 ಡಿಸೆಂಬರ್ ಹಾಗು 23 ಡಿಸೆಂಬರ್ 2020 ರಂದು ತೆರೆಯಲಾಗಿದೆ. ಈ ಮಳಿಗೆಯಲ್ಲಿ ಕೇವಲ ಸಾವಯವ ವಸ್ತುಗಳು ಮಾತ್ರ ಲಭ್ಯ . ಸಾವಯವ ಪದ್ದತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಹಾಗು ಬೆಳೆಗೆ ಪೂರಕವಾದ ಗೊಬ್ಬರ ಪೂರೈಕೆಗೆ ಒಟ್ಟು ನೀಡಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.
ಶುಕ್ರವಾರದಂದು ಮಾಂಡವಿ ಮೆರೆಡಿಯಾನ್ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಕ್ರಮವನ್ನು ಉಡುಪಿಯ ಪ್ರಸಿದ್ಧ ಆಯುರ್ವೇದ ತಜ್ಞ ಡಾ. ತನ್ಮಯ್ ಗೋ ಸ್ವಾಮಿ ಯವರು ಉಧ್ಘಾಟಿಸಿದರು. ಕೃಷ್ಣರಾವ್ ಕೊಡಂಚ, ತ್ರಿಷ ರಾವ್ ( ಏ ಜಿ ಎಂ, ಐ ಡಿ ಬಿ ಐ ಬ್ಯಾಂಕ್ ) ಮತ್ತು ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಇವರುಗಳು ಭಾಗವಹಿಸಿದ್ದರು.
ಬುಧವಾರದಂದು ದೊಡ್ಡಣಗುಡ್ಡೆಯ ಹೂ ಮಾರಾಟ ಮಳಿಗೆಗಳ ಸಂಕೀರ್ಣದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಕಟಪಾಡಿ ವಿಜಯ ಇಂಡಸ್ಟ್ರೀಸ್ ಸಂತ್ಯೆನ್ದ್ರ ಪೈ, ನೆರವೇರಿಸಿದರು, ಡಾ. ಹರೀಶ್ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.