ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರಿಂದ ಮುದ್ರಾಧಾರಣೆ

ಕಾಪು‌ : ಆಷಾಢ ಏಕಾದಶಿಯ ಪ್ರಯುಕ್ತ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಸಂಸ್ಥಾನಂ ಶ್ರೀ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ಭಕ್ತಾಧಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿಕೊಟ್ಟರು.

250 ಕ್ಕೂ‌ ಅಧಿಕ‌ ಮಂದಿ ಸ್ತ್ರೀ ಪುರುಷರೆಂಬ ಬೇದಭಾವವಿಲ್ಲದೆ ಭಗವದ್ಭಕ್ತರು ಉತ್ಸಾಹದಿಂದ ಮುದ್ರಾಧಾರಣೆ ಮಾಡಿಸಿಕೊಂಡರು. ಶ್ರೀ ದೇಗುಲದ ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷ ವೇ. ಮೂ. ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಆಡಳಿತ ಮಂಡಳಿ ಸದಸ್ಯರು, ತಂತ್ರಿ, ಅರ್ಚಕ ವರ್ಗದವರು ಮತ್ತು ಕುತ್ಯಾರು-ಪಾದೂರು- ಕಳತ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply