ಕಲ್ಲಡ್ಕ ಪ್ರಭಾಕರ ಭಟ್ಟರು ತುಳು ಜನರಲ್ಲಿ ಕ್ಷಮೆ ಕೇಳಬೇಕು~ಕಾಂಗ್ರೇಸ್ ಮುಖಂಡರು  

ತುಳುರಾಜ್ಯ ವೆನಿಸಿದ ಭೂತಾಳ ಪಾಂಡ್ಯನ ಸವಿಸ್ತಾರವಾದ ತುಳುನಾಡ ರಾಜ್ಯವಾದ ಬಾರ್ಕೂರು ಟು ಉಳ್ಳಾಲ ತುಳುವರ ರಾಜ್ಯಧಾನಿಯಾಗಿ ಮೆರದ ಇತಿಹಾಸವಿದೆ.  ತುಳುನಾಡ ವರ್ತುಲದ ಸೀಮೆಯಾದ ಉಳ್ಳಾಲವನ್ನು ಕಲ್ಲಡ್ಕ ಪ್ರಭಾಕರ ಭಟ್ಟರು ತಮ್ಮ ರಾಜಕೀಯ ಬೇಳೆ ಬೇಯಿಸಲು ಹಾಗು ಬಾಯ್ ಚಟ ತಿರಿಸಲು ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿರುವುದು ಖಂಡನೀಯ. 
ಇದು ತುಳು ಭಾಷಿಕರಿಗೆ ಅವಮಾನಿಸಿದಂತೆ, ಗತಕಾಲದಲ್ಲಿ ತುಳು ರಾಜ್ಯವೆನಿಸಿದ ಬಾರ್ಕೂರು ಟು ಉಳ್ಳಾಲದ ವರಗೆ ಸವಿಸ್ತಾರವಾದ ತುಳುನಾಡಸಂಸ್ಕೃತಿ, ಆಚಾರ-ವಿಚಾರಗಳನ್ನು ಮೈದುಂಬಿ ಕೊಂಡಂತಹ  ಉಳ್ಳಾಲವನ್ನು ಕೆದಕಿ ಕೆದಕಿ ಪಾಕಿಸ್ತಾನಕ್ಕೆ ಹೋಲಿಸುವುದು ಭಟ್ಟರ ಮೂರ್ಖತನದ ಪರಮಾವಧಿಯ ಹೇಳಿಕೆಯಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ಟಹೇಳಿಕೆ ಸಮಸ್ತ ತುಳು ಬಾಂಧವರಿಗೆ ನೋವುಂಟಾಗಿದೆ ಎಂದು ಖೇದ ವ್ಯಕ್ತ ಪಡಿಸಿದ್ದಾರೆ.
ಭಟ್ಟರು ತುಳು ಜನರಲ್ಲಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಜಯಶೆಟ್ಟಿ ಶೆಟ್ಟಿ ಬನ್ನಂಜೆ ,ಗಣೇಶ್ ರಾಜ್ ಸರಳೇಬೆಟ್ಟು , ಮೋಹನ್ ದಾಸ್ ನಾಯಕ್ ಪರ್ಕಳ, ವಾಲ್ಟರ್ ಡಿಸೋಜಾ ಕೊಳಲಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 
 
 
 
 
 
 
 
 
 
 

Leave a Reply