ಉಡುಪಿ: ಸಮಗ್ರ ಜೀರ್ಣೋದ್ಧಾರಗೊಂಡ ಇತಿಹಾಸ ಪ್ರಸಿದ್ಧ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ ಪೂಜೆಯ ನಂತರ ನೂತನ ಶರ್ವಾಣಿ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಪ್ರತಿ ಶುಕ್ರವಾರ ಮಧ್ಯಾಹ್ನ 12.30 ಪ್ರಾರಂಭವಾಗುವ ಅನ್ನ ಸಂತರ್ಪಣೆ 2.00 ಗಂಟೆಯ ತನಕ (ಏಕಾದಶಿ ಹೊರತುಪಡಿಸಿ)ನಡೆಯಲಿದೆ ಎಂದು ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಡಾ ಕಟ್ಟೆ ರವಿರಾಜ್ ಆಚಾರ್ಯ ತಿಳಿಸಿರುತ್ತಾರೆಈ ಅನ್ನಸಂತರ್ಪಣೆ ಸಂದರ್ಭದಲ್ಲಿ ಊಟ ಬಳಸುವ ಸೇವೆಗೆ ಆದಷ್ಟು ಗ್ರಾಮದ ಸ್ವಯಂಸೇವಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.