ಕಡಿಯಾಳಿ ಕ್ಷೇತ್ರದಿಂದ ದೇವ ಸೇವೆ ಸಮಾಜ ಸೇವೆ

ಇದೇ ಬರುವ ಮೇ 26 ಗುರುವಾರ ಸಾಯಂಕಾಲ 5.00 ಗಂಟೆಗೆ ಉಡುಪಿ ಕಲ್ಸಂಕ ಸರ್ಕಲ್ ನಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ವಿಶಿಷ್ಟ ರೀತಿಯಲ್ಲಿ ದೇವಳದ ಪ್ರಚಾರದ ಕೊಡೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದರ ಬಿಡುಗಡೆಯನ್ನು ಉಡುಪಿಯ ಖ್ಯಾತ ಸಮಾಜಸೇವಕರಾದ ಡಾ ಪಿ ವಿ ಭಂಡಾರಿ, ರವಿ ಕಟಪಾಡಿ, ವಿಶು ಕುಮಾರ್ ಶೆಟ್ಟಿ ಅಂಬಲಪಾಡಿ, ನೀತಾ ಪ್ರಭು ಕಾಪು, ನಿತ್ಯಾನಂದ ಒಳಕಾಡು, ಶ್ರೀಮತಿ ಪೃಥ್ವಿಪೈ , ಈಶ್ವರ್ ಮಲ್ಪೆರವರು ಉದ್ಘಾಟನೆ ಮಾಡಲಿದ್ದಾರೆ. ಈ ರೀತಿ ಸಾವಿರಾರು ಕೊಡೆಯನ್ನು ಉಡುಪಿ ಜಿಲ್ಲಾದ್ಯಂತ ಕಟ್ಟಲಾಗಿ ಜೂನ್ 10ರ ತನಕ ದೇವಳದ ಬ್ರಹ್ಮ ಕಲಶೋತ್ಸವದ ಪ್ರಚಾರ ನಡೆಸಲಿದ್ದು ತದನಂತರ ಸಮಾಜದ ಬಡವರಿಗೆ ಉಚಿತವಾಗಿ ನೀಡಲಾಗುವುದು ಈ ರೀತಿಯ ವಿಶಿಷ್ಟ ಕಲ್ಪನೆಯನ್ನು ಶ್ರೀ ಕ್ಷೇತ್ರದಿಂದ ನಡೆಸಲಾಗುತ್ತಿದ್ದು ತಾವು ಈ ಕಾರ್ಯಕ್ರಮಕ್ಕೆ ತಪ್ಪದೆ ಆಗಮಿಸಬೇಕಾಗಿ ವಿನಂತಿ.

ವಿಶೇಷ ಸೂಚನೆ ಕಲ್ಸಂಕದಿಂದ ಐದು ಗಂಟೆಗೆ ಹೊರಟು ಮೆರವಣಿಗೆ ಮೂಲಕ ಕಡಿಯಾಳಿ ಗೆ ಆಗಮಿಸುವುದು.

 
 
 
 
 
 
 
 
 
 
 

Leave a Reply