ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ
ಸಹಯೋಗದಲ್ಲಿ ಕಲಾವಿದರಾದ ಜನಾರ್ದನ ಹಾವಂಜೆಯವರ ಏಕವ್ಯಕ್ತಿ ಚಿತ್ರಕಲಾ
ಪ್ರದರ್ಶನವನ್ನು ದಿನಾಂಕ ೧೦ನೆಯ ಡಿಸೆಂಬರ್ ೨೦೨೨ರಂದು ಸಂಜೆ ಐದು ಘಂಟೆಗೆ
ಉಡುಪಿಯ ಬಡಗುಪೇಟೆಯಲ್ಲಿರುವ ಹತ್ತು ಮೂರು ಇಪ್ಪಂತ್ತೆoಟು ಗ್ಯಾಲರಿಯಲ್ಲಿ
ಆಯೋಜಿಸಲಾಗುತ್ತಿದೆ.

ಈ ಕಲಾ ಪ್ರದರ್ಶನವನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ
ಗೌರವಾಧ್ಯಕ್ಷ ಶ್ರೀ ವಿಶ್ವನಾಥ ಶೆಣೈಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಹಾಗೂ
ಲೇಖಕರಾದ ಡಾ. ಕಾತ್ಯಾಯನಿ ಕುಂಜಿಬೆಟ್ಟು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.


ಹಾವಂಜೆಯವರು ನಿಸರ್ಗದ ಬಗೆಗಿನ ಒಳನೋಟಗಳನ್ನು ತಾವೇ ಸ್ವತಃ
ತಯಾರಿಸಿರುವ ಕಾಗದಗಳ ಮೇಲೆ ಜಲವರ್ಣ ಮಾಧ್ಯಮದಲ್ಲಿ ಅಭಿವ್ಯಕ್ತಿಸಿರುವ
ಸುಮಾರು ಮೂವತ್ತರಷ್ಟು ಕಲಾಕೃತಿಗಳು ಪ್ರದರ್ಶನಕ್ಕಿರಲಿದ್ದು ಕಲಾ
ಪ್ರದರ್ಶನವು 14ನೆಯ ಡಿಸೆಂಬರ್ ತನಕ ಬೆಳಿಗ್ಗೆ 11ರಿಂದ ಸಂಜೆ 7ರ ತನಕ
ಕಲಾಸಕ್ತರ ವೀಕ್ಷಣೆಗೆ ತೆರೆದಿರುತ್ತದೆ.

 
 
 
 
 
 
 
 
 

Leave a Reply