ಸಮುದ್ರ ಪೂಜೆಯೊಂದಿಗೆ ಉತ್ಸವ ಆರಂಭವಾಗಲಿದ್ದು ಮರವಂತೆಯ ಮಹಾರಾಜಸ್ವಾಮಿ ದೇವಸ್ಥಾನದಿಂದ ಸಮಾರಂಭದ ಸಭಾಂಗಣಕ್ಕೆ ಮೆರವಣಿಗೆ ಇರಲಿದೆ. ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ ರಾಷ್ಟ್ರದ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ. ಎಸ್. ಅಂಗಾರ ಉದ್ಬಾಟಿಸಲಿದ್ದಾರೆ. ವಿವಿಧ ವಸ್ತು ಪ್ರದರ್ಶನಗಳನ್ನು ಸಚಿವ ಸುನಿಲ್ ಕುಮಾರ್, ಸಂಸದ ರಾಘವೇಂದ್ರ, ಶಾಸಕ ಸುಕುಮಾರ್ ಶೆಟ್ಟಿ ಅವರು ಉದ್ಭಾಟಿಸಲಿದ್ದಾರೆ.
ಪರಿಷತ್ತಿನ ಕರಾವಳಿ ವಿಭಾಗೀಯ ಸಂಚಾಲಕಿ ಡಾ। ಭಾರತಿ ಮರವಂತೆ ಮಾತನಾಡಿ, ಜನಪದ ಕಲಾ ಪ್ರದರ್ಶನದ ಜತೆಗೆ ಸಾಂಸ್ಕೃತಿಕ ವೈಭವದ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು. ಸಮಾರೋಪ ಅಪರಾಹ್ನ 4ಕ್ಕೆ ನಡೆಯುವ ಸಮ್ಮಾನ ಮತ್ತು ಸಮಾರೋಪದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಭಾಗವಹಿಸಲಿದ್ದಾರೆ. ಜಾನಪದ ವಿದ್ದಾಂಸರು, ಹಾಗೂ ಜಾನಪದ ಸಾಧಕರಿಗೆ ಸಮ್ಮಾನ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷೆ ಡಾ| ನಿಕೇತನಾ ಹೇಳಿದರು.
ದ.ಕ. ಜಿಲ್ಲಾಧ್ಯಕ್ಷ ಡಾ| ಪ್ರಶಾಂತ್ ಕುಮಾರ್, ಉ.ಕ. ಜಿಲ್ಲಾಧ್ಯಕ್ಷ ಡಾ| ಪ್ರಕಾಶ್ ನಾಯಕ್, ಕಾರ್ಯ ಕಾರಿ ಸಮಿತಿಯ ರವಿ ಮಡಿವಾಳ ಮರವಂತೆ, ದಯಾನಂದ ಬಳೆಗಾರ್ ಉಪಸ್ಥಿತರಿದ್ದರು. ಪರಿಷತ್ನ ಕರಾವಳಿಯ ವಿಭಾಗೀಯ ಘಟಕ ಮತ್ತು ಲಯನ್ಸ್ ಕ್ಲಬ್, ಕೋಸ್ಟಲ್ ಕುಂದಾಪುರ ಸಂಸ್ಥೆಯ ಸಹಯೋಗವಿದೆ.