ಚೈಲ್ಡ್ ಲೈನ್ ಉಡುಪಿಯ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಅಭಿಯಾನ

ಉಡುಪಿ: ವಿಶ್ವ ಪರಿಸರ ದಿನದ ಅಂಗವಾಗಿ ಚೈಲ್ಡ್ ಲೈನ್ ಉಡುಪಿಯ ವತಿಯಿಂದ ವಾಹನದಲ್ಲಿ ಕೊರೊನಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ, ಬಾಲ್ಯವಿವಾಹ ಇತ್ಯಾದಿ ಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.

ಜಿಲ್ಲೆಯಾದ್ಯಂತ ನಡೆದ ಈ ಅಭಿಯಾನಕ್ಕೆ ಉಡುಪಿ ವಲಯ ಶಾಮಿಯಾನ ಸಂಘದ ಅಧ್ಯಕ್ಷ ಮಾರ್ಪಳ್ಳಿ ನಾಗರಾಜ ಉಪಾಧ್ಯಾಯ ಚಾಲನೆ ನೀಡಿದರು.ಚೈಲ್ಡ್ ಲೈನ್ ಸಂಯೋಜಕಿ ಕಸ್ತೂರಿ,ವೃಷಕ್,ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply