ಅಮೇರಿಕಾದ ಮನೆಯಲ್ಲಿ ಶುದ್ಧ ದೇಸೀ ಗೋಶಾಲೆ !

ಭಾವಿ ಪರ್ಯಾಯ ಪೀಠಾಧಿಪತಿ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 49ನೇ ಚಾತುರ್ಮಾಸ್ಯ ಸುಸಂದರ್ಭದಲ್ಲಿ ಮನೆಯಲ್ಲಿಯೇ ಗೋಶಾಲೆಯನ್ನು ನಿರ್ಮಿಸಿ ಹಸುಗಳನ್ನು ಸಾಕಿಕೊಂಡಿರುವ, ಇಂಜಿನಿಯರ್ ಆಗಿರುವ ಶ್ರೀಕೃಷ್ಣ ಪುರುಷೋತ್ತಮ ದಾಸ್ ರವರ ಮನೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು .

ಇವರ ತಮ್ಮ ಶ್ರೀ ರಾಮದಾಸಪ್ರಭು ಇವರು ಉಡುಪಿ ಸಮೀಪದ ಹೆಬ್ರಿ ಯಲ್ಲಿ ಬೃಹತ್ ಗೋಶಾಲೆಯೊಂದನ್ನು ನಡೆಸುತ್ತಿದ್ದಾರೆ .

ಕಳೆದ ಬಾರಿ ಇಲ್ಲಿಗೆ ಬಂದಾಗ ಶ್ರೀಪಾದರು ಬೃಹತ್ ಗೋಶಾಲೆಯೊಂದಕ್ಕೆ ಶಿಲಾನ್ಯಾಸ ಮಾಡಿದ್ದು ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ .
ಗೋ ರಕ್ಷಣೆ ಗಿರುವ ಕಾಳಜಿ ಯನ್ನು ಮೆಚ್ಚಿ ಪೂಜ್ಯ ಶ್ರೀಪಾದರು ಹಾರೈಸಿದರು .

ದೇಸೀ ಗೋ ತಳಿ ಗೀರ್ ಜಾತಿಯ ಇಲ್ಲಿರುವ ದನ-ಕರುಗಳಿಗೆ ಲಕ್ಷ್ಮಿ ,ರುಕ್ಮಿಣಿ ಎಂದೂ ಹೋರಿಯೊಂದಕ್ಕೆ ಗಿರಿರಾಜ ಎಂದು ನಾಮಕರಣ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : www.surabhi.org

 
 
 
 
 
 
 
 
 

Leave a Reply