“ಹರ್ಷ”~ ಉಡುಪಿಯ ಅತಿದೊಡ್ಡ 3ನೇ ಮಳಿಗೆ ಶುಭಾರಂಭ

ಉಡುಪಿ: ಗೃಹೋಪಕರಣಗಳ ಅತಿ ದೊಡ್ಡ ಮಳಿಗೆ ಹರ್ಷ ಇದರ ಉಡುಪಿಯ ಅತಿದೊಡ್ಡ ಮೂರನೇ ಮಳಿಗೆಯ ಲೋಕಾರ್ಪಣೆಯ ಸಮಾರಂಭ ಇಂದು ಸಂಜೆ 4.30ಕ್ಕೆ ಸಿಟಿ ಬಸ್ ನಿಲ್ದಾಣದ ಬಳಿಯ ಶ್ರೀ ದತ್ತ ಕೃಪಾ ಬಿಲ್ಡಿಂಗ್ ನಲ್ಲಿ ನಡೆಯಲಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟನೆ ನೆರವೇರಿಸಲಿದ್ದಾರೆ. 
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಎಂ. ಸೋಮಶೇಖರ್ ಭಟ್ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್.

ನಗರಸಭಾಧ್ಯಕ್ಷ ಸುಮಿತ್ರಾ ನಾಯಕ್, ಮಣಿಪಾಲ್ ಟೆಕ್ನೋಲಜೀಸ್ ಲಿ. ಎಕ್ಸಿಕ್ಯೂಟಿವ್ ಚೈರ್ಮನ್ ಗೌತಮ್ ಪೈ, ಕೆನರಾ ಬ್ಯಾಂಕ್ ಮಣಿಪಾಲ ಜನರಲ್ ಮ್ಯಾನೇಜರ್ ರಾಮ ನಾಯ್ಕ್, ಚಿತ್ರಾಪುರ ಮಠದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಪಿ. ಕಡ್ಲೆ, ಇಂಡಿಯನ್ ಐಡಾಲ್ ಸ್ಪರ್ಧೆಯ ಟಾಪ್ 5 ಫೈನಲಿಸ್ಟ್ ನಿಹಾಲ್ ತಾವ್ರೋ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

 
 
 
 
 
 
 
 
 
 
 

Leave a Reply