ಸರಕಾರಿ ಪ್ರೌಢ ಶಾಲೆ ಹನುಮಂತ ನಗರ: ಭಾಷಾ ಸಂಘ ಉದ್ಘಾಟನಾ ಸಮಾರಂಭ

ದಿನಾಂಕ: 15/07/2022 ರಂದು ಸರಕಾರಿ ಪ್ರೌಢ ಶಾಲೆ ಹನುಮಂತ ನಗರ , ಉಡುಪಿ ಇಲ್ಲಿ ಭಾಷಾ ಸಂಘ ಉದ್ಘಾಟನಾ ಸಮಾರಂಭ ನಡೆಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮುಸರ್ರತ್ ಜಹಂನ್ ಅಕ್ಬರ್ ಎಂ. ವಹಿಸಿದ್ದರು , ರಾಜ್ಯ ಪ್ರಶಸ್ತಿ ಪುರಸ್ಕೃತರಾದ, ನಾಡಿನ ಪ್ರಸಿದ್ಧ ಗಾಯಕ ಡಾ.ಗಣೇಶ್ ಗಂಗೊಳ್ಳಿ ಅವರು , ಕನ್ನಡ ಭಾಷೆಯ ಬಗ್ಗೆ ಹಾಡಿನ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಗ್ಗೆ ನಮ್ಮ ನಮಗೆ ಅಭಿಮಾನ ಮತ್ತು ಹೆಮ್ಮೆ ಇರಬೇಕು ಆಮೂಲಕ ನಮ್ಮ ಕಲೆ ಸಂಸ್ಕ್ರತಿಯನ್ನೂ, ಇಂದಿನ ವಿದ್ಯಾರ್ಥಿಗಳು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವಂತಾಗ ಬೇಕು ಎಂದು ಕರೆನೀಡಿದರು.

ಉಪನ್ಯಾಸಕರಾದ ಶ್ರೀಮತಿ ರೇಖಾ ಅವರು ಸ್ವಾಗತಿಸಿದರು, ಡೋರಿಸ್ ಫ್ಲೋರಾ ಡಿಸೋಜ ವಂದಿಸಿದರು, ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿಯರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply