ಹಂಗಾರಕಟ್ಟೆಯ ಬಾಳಕುದ್ರು ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ ವಿಜಯಗೋಪುರ ಲೋಕಾರ್ಪಣೆ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆಯ ಶ್ರೀಮಠ ಬಾಳೆಕುದ್ರು ಇದರ ವಿಜಯಗೋಪುರ, ಗುರುಭವನ, ಪಾಕಶಾಲೆ, ಭೋಜನಾಶಾಲೆ ಲೋಕಾಪರ್ಣೆ ಹಾಗೂ ಶ್ರೀ ನೃಸಿಂಹ ಜಯಂತ್ಯುತ್ಸವ ಕಾರ್ಯಕ್ರಮವು ಇದೇ ಬರುವ ಮೇ. 13 ಶುಕ್ರವಾರ ಮತ್ತು 14 ಶನಿವಾರ ನಡೆಯಲಿದೆ.
ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯ ಪೂರ್ಣನುಗ್ರಹದೊಂದಿಗೆ ವೇದ ಕೃಷಿಕ ಬ್ರಹ್ಮಶ್ರೀ ನಿತ್ಯಾನಂದ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ಶ್ರೀ ಮಠದ ವಿಜಯಗೋಪುರ, ಗುರುಭವನ, ಪಾಕಶಾಲೆ, ಭೋಜನಾಶಾಲೆ ಲೋಕಾಪರ್ಣ ಸಮಾರಂಭ 14.05.2022 ಶನಿವಾರ ಶ್ರೀ ಶ್ರೀ ಶ್ರೀ ಯವರ ಅನುಜ್ಞೆಯಂತೆ ಶ್ರೀ ನೃಸಿಂಹ ಜಯಂತ್ಯುತ್ಸವ ಜರುಗಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರೀ ಮಠದ ಶಿಷ್ಯಂದಿರು,ಭಕ್ತಾಭಿಮಾನಿಗಳು,ಊರ ಪರವೂರ ನಾಗರಿಕರು ಉಪಸ್ಥಿತರಿದ್ದು ಸಹಭಾಗಿಗಳಾಗಿ ಶ್ರೀ ಗುರುದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಲ್ಲದೆ ಹೊರೆಕಾಣಿಕೆ ಸಲ್ಲಿಸುವವರು ಸಲ್ಲಿಸಬಹುದಾಗಿದೆ ಎಂದು ಬಾಳಕುದ್ರು ಶ್ರೀ ಮಠದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಕಲ್ಕೂರ,ಶ್ರೀಮಠದ ವ್ಯವಸ್ಥಾಪಕ ಮಂಜುನಾಥ, ಶ್ರೀ ಮಠದ ಪರಿಚಾರಕ ವಿನಯ್ ಭಟ್ ಮತ್ತಿತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply